ಮಧು ಪತ್ತಾರ್ ಸಾವಿಗೆ ಸಂಬಂಧಿಸಿದಂತೆ ಸಿಐಡಿ ನಡೆಸುತ್ತಿರುವ ತನಿಖೆ ಸಂಬಂಧ ಕೆಲ ಮಹತ್ವದ ದಾಖಲೆಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಲಭ್ಯವಾಗಿದ್ದು, ದಾಖಲೆಗಳಲ್ಲಿರುವಂತೆ ನಾಪತ್ತೆಯಾದ ದಿನ ಮಧು ಪತ್ತಾರ್ ಮೇಲೆ ಆರೋಪಿ ಸುದರ್ಶನ್ ಯಾದವ್ ಹಲವು ಬಾರಿ ಹಲ್ಲೆ ನಡೆಸಿದ್ದ ಎಂದು ಹೇಳಲಾಗಿದೆ. ಅಂತೆಯೇ ಸಾವನ್ನಪ್ಪಿದ ವಿದ್ಯಾರ್ಥಿ ಮಧು ಪತ್ತಾರ್ ಳ ದ್ವಿಚಕ್ರ ವಾಹನದ ಕೀ ಕೂಡ ಆತನ ಬಳಿ ಇತ್ತು. ಅದನ್ನು ಪೊಲೀಸರು ತನಿಖಾ ಸಂದರ್ಭದಲ್ಲಿ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.