ಲಾಕ್ ಡೌನ್: ರೈತರ ಸಂಕಷ್ಟಕ್ಕೆ ನೆರವಾದ ದಿನೇಶ್ ಗುಂಡೂರಾವ್, ರೈತರಿಂದ 100 ಕ್ವಿಂಟಾಲ್ ತರಕಾರಿ ಖರೀದಿ

ಕೊರೋನಾವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಹೇರಿರುವ ಲಾಕ್ ಡೌನ್ ನಿಂದಾಗಿ ರೈತಉ ಸಂಕಷ್ಟದಲ್ಲಿದ್ದಾರೆ. ಇದನ್ನು ಪರಿಗಣಿಸಿ ಕಾಂಗ್ರೆಸ್ ನಾಯಕ  ದಿನೇಶ್​​ ಗುಂಡೂರಾವ್​​ ರೈತರಂದ 100 ಕ್ವಿಂಟಾಲ್​​​ ತರಕಾರಿ ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಿದ್ದಾರೆ. ಕರ್ನಾಕಟ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​ ಅವರ ಈ ಕೆಲಸ ಅನೇಕರ ಮೆಚ್ಚುಗೆಗ
ದಿನೇಶ್ ಗುಂಡೂರಾವ್
ದಿನೇಶ್ ಗುಂಡೂರಾವ್
Updated on

ಬೆಂಗಳೂರು: ಕೊರೋನಾವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಹೇರಿರುವ ಲಾಕ್ ಡೌನ್ ನಿಂದಾಗಿ ರೈತಉ ಸಂಕಷ್ಟದಲ್ಲಿದ್ದಾರೆ. ಇದನ್ನು ಪರಿಗಣಿಸಿ ಕಾಂಗ್ರೆಸ್ ನಾಯಕ  ದಿನೇಶ್​​ ಗುಂಡೂರಾವ್​​ ರೈತರಂದ 100 ಕ್ವಿಂಟಾಲ್​​​ ತರಕಾರಿ ಖರೀದಿಸಿ ಬಡವರಿಗೆ ಉಚಿತವಾಗಿ ಹಂಚಿದ್ದಾರೆ. ಕರ್ನಾಕಟ ಪ್ರಾದೇಶಿಕ ಸಮಿತಿಯ ಮಾಜಿ ಅಧ್ಯಕ್ಷ ದಿನೇಶ್​​ ಗುಂಡೂರಾವ್​​ ಅವರ ಈ ಕೆಲಸ ಅನೇಕರ ಮೆಚ್ಚುಗೆಗೆ ಪಾತ್ರವಾಗಿದೆ. 

ಬುಧವಾರ ತನ್ನ ಸ್ನೇಹಿತರೊಂದಿಗೆ ದೇವನಹಳ್ಳಿಯ ತಾಲೂಕಿನ ಹಳ್ಳಿತಯೊಂದಕ್ಕೆ ಭೇಟಿ ಕೊಟ್ಟ ದಿನೇಶ್ ಗುಂಡೂರಾವ್ ಇಲ್ಲಿನ ರೈತರ ತೋಟದಲ್ಲಿ ಕೆಲ ಸಮಯ ಸುತ್ತಾಡಿದ ಕಾಂಗ್ರೆಸ್ ನಾಯಕ ರೈತರಿಂದ ಮಾರು 100 ಕ್ವಿಂಟಾಲ್​​​ ತರಕಾರಿಯನ್ನು ಖರೀದಿದ್ದಾರೆ.

2.5 ಟನ್​​​ ತೊಂಡೆಕಾಯಿ,  2.5 ಟನ್​​​ ಟೊಮೋಟೋ, 2.2 ಟನ್​​ನಷ್ಟು ಈರುಳ್ಳಿ ಹಾಗೂ 1.2 ಟನ್​​, ಕ್ಯಾರೇಟ್​ 1.2 ಟನ್​​​, 25 ಕೆ.ಜಿ ಬದನೆಕಾಯಿ  ಮತ್ತು 250 ಕೆಜಿ ಸೋರೆಕಾಯಿಯನ್ನು ಖರೀದಿಸಿದ್ದಾರೆ.

ಈ ಸಂಬಂಧ ದಿನೇಶ್ ಗುಂಡೂರಾವ್ ಟ್ವೀಟ್ ಮಾಡಿಕೊಂಡಿದ್ದು ತಾನು ಖರೀದಿಸಿದ ಈ ತರಕಾರಿಗಳನ್ನು ಕ್ಷೇತ್ರದ ಬಡವರಿಗೆ ಉಚಿತವಾಗಿ ಹಂಚುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com