ಬೆಂಗಳೂರು: ಜೋಡಿ ಕೊಲೆ‌ ಆರೋಪಿ‌ ಕಾಲಿಗೆ ಗುಂಡೇಟು, ಬಂಧನ

ಕೊರೋನಾ ಸೋಂಕು ನಿಯಂತ್ರಿಸಲು‌ ಜಾರಿಯಾದ ಲಾಕ್​ಡೌನ್​ ಮಧ್ಯೆಯೂ ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು ಕೇಳಿಸಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ಸೋಂಕು ನಿಯಂತ್ರಿಸಲು‌ ಜಾರಿಯಾದ ಲಾಕ್​ಡೌನ್​ ಮಧ್ಯೆಯೂ ಸಿಲಿಕಾನ್ ಸಿಟಿಯಲ್ಲಿ ಗುಂಡಿನ ಸದ್ದು ಕೇಳಿಸಿದೆ.

ಜೋಡಿ ಹತ್ಯೆಗೈದಿದ್ದ ಆರೋಪಿ ಮೇಲೆ ಪೊಲೀಸರು ಇಸ್ರೋ ಲೇಔಟ್ ನ ದೇವರ ಕೆರೆ ಬಳಿ ರಾತ್ರಿ ಗುಂಡು ಹಾರಿಸಿ, ಬಂಧಿಸಿದ್ದಾರೆ. ಆರೋಪಿ ಸಂಜಯ್ ಅಲಿಯಾಸ್ ಚಿಕ್ಕಪ್ಪಿ ಕಾಲಿಗೆ ಪೊಲೀಸರು ಗುಂಡು ಹಾರಿಸಿ‌ ವಶಕ್ಕೆ ಪಡೆದಿದ್ದಾರೆ. 
ಇತ್ತೀಚೆಗೆ ನಗರದಲ್ಲಿ ನಡೆದಿದ್ದ ಜೋಡಿ ಕೊಲೆ ಪ್ರಕರಣದಲ್ಲಿ ಈ ಸಂಜಯ್ ಪ್ರಮುಖ ಆರೋಪಿಯಾಗಿದ್ದನು. 
ಆರೋಪಿ ಸಂಜಯ್ ಇದ್ದ ಖಚಿತ ಮಾಹಿತಿ ಮೇರೆಗೆ ಸುಬ್ರಹ್ಮಣ್ಯಪುರ ಠಾಣೆ ಸಬ್ ಇನ್ಸ್ ಪೆಕ್ಟರ್ ಮಧು ಹಾಗೂ ಕೋಣನಕುಂಟೆ ಇನ್ಸ್ ಪೆಕ್ಟರ್ ‌‌ಧರ್ಮೆಂದ್ರ‌ ಆತನನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಸುಬ್ರಮಣ್ಯಪುರ ಠಾಣೆ ಸಬ್ ಇನ್ಸ್​​ಪೆಕ್ಟರ್​ಗೆ ಚಾಕುವಿನಿಂದ ಇರಿಯಲು ಆರೋಪಿ‌ ಯತ್ನಿಸಿದ್ದಾನೆ. ತಕ್ಷಣವೇ ಆರೋಪಿಗೆ ಪೊಲೀಸರು ಶರಣಾಗುವಂತೆ ಸೂಚಿಸಿದ್ದಾರೆ. ‌ಆದರೆ, ಆತ ಮತ್ತೆ ಹಲ್ಲೆಗೆ ಮುಂದಾದಾಗ ಕೋಣನಕುಂಟೆ ಇನ್ಸ್​ಪೆಕ್ಟರ್​ ಧರ್ಮೇಂದ್ರ, ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿ ಸಂಜಯ್​ನನ್ನು ಬಂಧಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ.

ಕೆಲ ದಿನಗಳ ಹಿಂದೆ ಸುಬ್ರಮಣ್ಯಪುರ ಠಾಣಾ ವ್ಯಾಪ್ತಿಯಲ್ಲಿ ರೌಡಿಶೀಟರ್ ಮುಕುಂದ ಅಲಿಯಾಸ್ ಕರಿ ಹಂದಿ ಹಾಗೂ ಮನೋಜ್ ಕೊಲೆ ನಡೆದಿತ್ತು. ಸಂಧಾನಕ್ಕೆಂದು ಸೇರಿದ್ದಾಗ ಮುಕುಂದ ಹಾಗೂ ಮನೋಜ್ ನನ್ನು ಸಂಜಯ್ ಟೀಮ್​​ ಕೊಲೆ ಮಾಡಿ ಪರಾರಿಯಾಗಿತ್ತು. ಈ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರನ್ನು ಬಂಧಿಸಿಲಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ‌ ರೋಹಿಣಿ ಕಟೋಚ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com