ಕೊರೋನದಿಂದ ನಲುಗಿರುವ ಕಲಬುರಗಿಯಲ್ಲಿ ಭಾರೀ ಮಳೆ, ಸಿಡಿಲಿಗೆ ಮೂವರು ಬಲಿ

ಕೊರೋನಾ ಮಹಾಮಾರಿಯಿಂದ ಕಲಬುರಗಿ ಜಿಲ್ಲೆ ನಲುಗಿದ್ದು ಇದೀಗ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಕಲಬುರಗಿ: ಕೊರೋನಾ ಮಹಾಮಾರಿಯಿಂದ ಕಲಬುರಗಿ ಜಿಲ್ಲೆ ನಲುಗಿದ್ದು ಇದೀಗ ಜಿಲ್ಲೆಯಲ್ಲಿ ಭಾರಿ ಮಳೆಯಾಗಿದ್ದು ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ.

ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಭೂಂಯರ್ ಗ್ರಾಮದಲ್ಲಿ ಸಿಡಿಲಿಗೆ 35 ವರ್ಷದ ಸುಭಾಷ್ ಹಳಕೇರಿ ಹಾಗೂ ಕುಪ್ಪಣ್ಣ ನವಲೆ (58) ಬಲಿಯಾಗಿದ್ದಾರೆ.

ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಈ ಇಬ್ಬರು ಸಾವನ್ನಪ್ಪಿದ್ದು, ಓರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದಂತೆಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು, ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಕೋಡ್ಲಿ ಗ್ರಾಮದಲ್ಲಿಯೂ ಸಿಡಿಲು ಬಡಿದು ಅನೀಲ್ ಭೋವಿ (22)ಮೃತಪಟ್ಟಿದ್ದಾರೆ.

ಕೆರೆ ಬಳಿ ಜೆಸಿಬಿಯಿಂದ ಕಾಮಾಗಾರಿ ನಡೆಸುತ್ತಿದ್ದಾಗ  ಸಿಡಿಲು ಬಡಿದು ಈತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com