ಮಡಿಕೇರಿ: ರಾಜ್ಯ ಮತ್ತು ರಾಜ್ಯದ ಹೊರಗೆ ವಾಹನಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಕುಶಾಲನಗರ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೇರಳದ ಕಣ್ಣೂರಿನ ನಿವಾಸಿ ರವೂಫ್ ಕೆ, ಕರಿಕೆಯ ಅಬ್ದುಲ್ ಫಾರೂಕ್ ಮತ್ತು ಸುಳ್ಯದ ಡೇವಿಡ್ ಪ್ರಶಾಂತ್ ಬಂಧಿತ ಆರೋಪಿಗಳು.
ಸುಮಾರು 3 ತಿಂಗಳ ಹಿಂದೆ ಕೋಳಿ ವ್ಯಾಪಾರಿಯೊಬ್ಬರು ತಮ್ಮ ಅಂಗಡಿ ಮುಂದೆ ನಿಲ್ಲಿಸಿದ್ದ ಪಿಕ್ ಅಪ್ ವಾಹನ ಕಾಣೆಯಾಗಿತ್ತು. ಅವರು ಈ ಬಗ್ಗೆ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
Advertisement