ರಾಜ್ಯದ ಏಳು ಮಂದಿಗೆ ಬ್ರಿಟನ್ ಸೋಂಕು: ಸಚಿವ ಸುಧಾಕರ್

ಬ್ರಿಟನ್‌ನಿಂದ ರಾಜ್ಯಕ್ಕೆ ಆಗಮಿಸಿರುವವರ ಪೈಕಿ ಇದುವರೆಗೂ 7 ಮಂದಿಯಲ್ಲಿ ರೂಪಾಂತರ ವೈರಸ್ ಇರುವುದು ದೃಢಪಟ್ಟಿದ್ದು, ಈ ರೂಪಾಂತರ ವೈರಸ್ ದೃಢಪಟ್ಟಿರುವವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದರು.
ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
Updated on

ಬೆಂಗಳೂರು: ಬ್ರಿಟನ್‌ನಿಂದ ರಾಜ್ಯಕ್ಕೆ ಆಗಮಿಸಿರುವವರ ಪೈಕಿ ಇದುವರೆಗೂ 7 ಮಂದಿಯಲ್ಲಿ ರೂಪಾಂತರ ವೈರಸ್ ಇರುವುದು ದೃಢಪಟ್ಟಿದ್ದು, ಈ ರೂಪಾಂತರ ವೈರಸ್ ದೃಢಪಟ್ಟಿರುವವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದರು.

ಈ ಕುರಿತಂತೆ ಮಾಹಿತಿ ನೀಡಿದ ಸಚಿವ ಸುಧಾಕರ್ ಅವರು, ಇದುವರೆಗೂ 7 ಮಂದಿಯಲ್ಲಿ ರೂಪಾಂತರ ವೈರಸ್ ಇರುವುದು ದೃಢಪಟ್ಟಿದ್ದು, ಈ ರೂಪಾಂತರ ವೈರಸ್ ದೃಢಪಟ್ಟಿರುವವರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂತೆಯೇ ಅವರ ಸಂಪರ್ಕಿತರನ್ನು ಗುರುತಿಸಿ ಸಾಂಸ್ಥಿಕ ಕ್ವಾರಂಟೈನ್‌ಗೆ  ಒಳಪಡಿಸಲಾಗಿದೆ. ಈ 7 ಜನರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಸಾಂಸ್ಥಿತ ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಿದರು.

ಬ್ರಿಟನ್‌ನಿಂದ ರಾಜ್ಯಕ್ಕೆ ಬಂದವರ ಪೈಕಿ ಬೆಂಗಳೂರಿನಲ್ಲಿ 3 ಮಂದಿಗೆ, ಶಿವಮೊಗ್ಗದಲ್ಲಿ ನಾಲ್ವರಿಗೆ ರೂಪಾಂತರ ಕೊರೊನಾ ವೈರಸ್ ಇರುವುದು ದೃಢಪಟ್ಟಿದೆ. ಬೆಂಗಳೂರಿನಲ್ಲಿ ರೂಪಾಂತರ ವೈರಸ್ ದೃಢಪಟ್ಟಿರುವ ಮೂವರ ಸಂಪರ್ಕದಲ್ಲಿ 36 ಮಂದಿ ಇದ್ದು, ಇವರನ್ನೆಲ್ಲಾ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು,  ಇವರ ಕೊರೊನಾ ವರದಿ ನೆಗೆಟಿವ್ ಬಂದಿರುವುದು ಸಮಾಧಾನದ ವಿಚಾರ. ಹಾಗೆಯೇ ಶಿವಮೊಗ್ಗಕ್ಕೆ ಬಂದಿದ್ದ ಬ್ರಿಟನ್ ಪ್ರಯಾಣಿಕರ ಪೈಕಿ 7 ಜನ ಸಂಪರ್ಕದಲ್ಲಿದ್ದು ಅವರನ್ನು ಸಹ ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಮೂವರಿಗೆ ಕೊರೊನಾ ದೃಢಪಟ್ಟಿದೆ ಎಂದರು. ಈ ಕೊರೊನಾ ದೃಢಪಟ್ಟಿರುವ  ಮೂವರನ್ನು ಜನೆಟಿಕ್ ಸೀಕ್ವೇನ್ಸ್ ಪರೀಕ್ಷೆಗೆ ಒಳಪಡಿಸಿ ಇವರಲ್ಲೂ ರೂಪಾಂತರ ವೈರಸ್ ಇದೆಯೇ, ಇಲ್ಲವೇ ಹಳೆಯ ವೈರಸ್ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುವುದು. ಸದ್ಯ ಈ ಎಲ್ಲ ಸಂಪರ್ಕಿತರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ ಎಂದರು.

ಬ್ರಿಟನ್‌ನಿಂದ ರಾಜ್ಯಕ್ಕೆ ಇದುವರೆಗೂ ಬಂದಿದ್ದವರ ಪೈಕಿ 1614 ಪ್ರಯಾಣಿಕರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅವರಲ್ಲಿ 26 ಮಂದಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ 26 ಮಂದಿಯನ್ನು ರೂಪಾಂತರ ವೈರಸ್ ಪತ್ತೆಗಾಗಿ ಜನೆಟಿಕ್ ಸೀಕ್ವೇನ್ಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. 26 ಮಂದಿಯಲ್ಲಿ  7 ಜನರಲ್ಲಿ ರೂಪಾಂತರ ವೈರಸ್ ದೃಢಪಟ್ಟಿದೆ ಎಂದರು. ರೂಪಾಂತರ ವೈರಸ್ ಪತ್ತೆಯಾಗಿರುವವರ ಸಂಪರ್ಕದಲ್ಲಿದ್ದವರು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಲೇಬೇಕಾಗುತ್ತದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಅವರು ಹೇಳಿದರು.

ರೂಪಾಂತಾರ ವೈರಸ್ ತೀವ್ರ ಪರಿಣಾಮ ಹೊಂದಿಲ್ಲದೆ ಇದ್ದರೂ ಹರಡುವ ಪ್ರಮಾಣ ಶೇ. 70 ರಷ್ಟು ವೇಗ ಹೊಂದಿರುವುದರಿಂದ ರೋಗ ಹರಡುವುದನ್ನು ತಡೆಯಲು ಎಲ್ಲರನ್ನು ಸಾಂಸ್ಥಿಕ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಆರಂಭದಲ್ಲೇ ರೋಗ ಹರಡುವಿಕೆಯನ್ನು ತಡೆಯಲೇಬೇಕು. ಹಾಗಾಗಿ ಅದಕ್ಕೆ ಅಗತ್ಯ  ಕ್ರಮ ಕೈಗೊಳ್ಳಲಾಗಿದೆ. ಬ್ರಿಟನ್‌ನಿಂದ ರಾಜ್ಯಕ್ಕೆ ಕಳೆದ 2 ತಿಂಗಳಲ್ಲಿ 2500 ಮಂದಿ ಬಂದಿದ್ದರು. ಇವರಲ್ಲಿ 1614 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿದೆ. ಉಳಿದವರನ್ನು ಪತ್ತೆಹಚ್ಚಿ ಅವರನ್ನು ತಪಾಸಣೆಗೆ ಒಳಪಡಿಸಿ ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಅದರಂತೆ ರಾಜ್ಯದ ಗೃಹ ಇಲಾಖೆ  ಬ್ರಿಟನ್‌ನಿಂದ ಬಂದವರ ಪತ್ತೆಗೆ ಕ್ರಮ ಕೈಗೊಂಡಿದೆ. ಇಂತಹವರನ್ನು ಪತ್ತೆಹಚ್ಚಿ ಕೊರೊನಾ ತಪಾಸಣೆಗಾಗಿ ಆರೋಗ್ಯ ಇಲಾಖೆಯ ಸುಪರ್ದಿಗೆ ಒಳಪಡಿಸುವ ಕೆಲಸ ನಡೆದಿದೆ. ಕಳೆದ 15 ದಿನಗಳಿಂದ ಬ್ರಿಟನ್‌ನಿಂದ ಬಂದವರೇ ರೂಪಾಂತರ ವೈರಸ್‌ನ್ನು ಹರಡುವವರು. ಹಾಗಾಗಿ ಮೊದಲಿಗೆ ಅವರ ಪರೀಕ್ಷೆ  ನಡೆಸಿದ್ದೇವೆ. ನಂತರ ಉಳಿದವರನ್ನು ಪರೀಕ್ಷೆಗೆ ಒಳಪಡಿಸಲಾಗುವುದು ಎಂದರು.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com