ವಿಜಯಪುರ: ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕೊಲ್ಹಾರ ಪಟ್ಟಣದ ಗರಸಂಗಿ ಕ್ರಾಸ್ ಬಳಿ ಸಂಭವಿಸಿದೆ.
ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ. ವಿಜಯಪುರ ದಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ಲಾರಿಗೆ, ಹುಬ್ಬಳ್ಳಿ ಯಿಂದ ವಿಜಯಪುರದೆಡೆಗೆ ತೆರಳುತ್ತಿದ್ದ ಲಾರಿ ರಾಷ್ಟ್ರೀಯ ಹೆದ್ದಾರಿ 218ಯಲ್ಲಿ ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ. ಮೃತರನ್ನು ನಾಗಠಾಣದ ದಾವಲ್ಸಾಬ ಹಾಜಿಸಾಬ ಅತ್ತಾರ (32), ಇಂಡಿ ತಾಲೂಕಿನ ಅಥರ್ಗಾದ ಕಾಸು ಚಂದ್ರಾಮ ಅಹಿರವಾಡಗಿ (36) ಹಾಗೂ ಮಧ್ಯಪ್ರದೇಶದ ಜಗದೀಶ ರಾಮಚಂದ್ರ ಬಾಮಾ (65) ಎಂದು ಗುರುತಿಸಲಾಗಿದೆ.
ವಿಜಯಪುರದಿಂದ ಹುಬ್ಬಳ್ಳಿ ಕಡೆಗೆ ಬೆಳ್ಳುಳ್ಳಿ ಮತ್ತು ತೆಂಗಿನಕಾಯಿ ಸಾಗಿಸುತ್ತಿದ್ದ ಲಾರಿಗೆ ಇನ್ನೊಂದು ಲಾರಿ ಡಿಕ್ಕಿ ಹೊಡೆದಿದೆ. ಕರ್ನಾಟಕ ಮೂಲದ ಲಾರಿಯಲ್ಲಿದ್ದ ಇಬ್ಬರು ಹಾಗೂ ಮಧ್ಯಪ್ರದೇಶದ ಲಾರಿಯಲ್ಲಿದ್ದ ಒಬ್ಬ ಚಾಲಕ ಸೇರಿದಂತೆ ಮೂವರು ಸ್ಥಳದಲ್ಲೇ ಅಸುನೀಗಿದ್ದಾರೆ. ಕೊಲ್ಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement