ಬಾಗಲಕೋಟೆ: ಐಟಿ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ಥರ ಮನೆ ಮೇಲೆ ದಾಳಿ!

ಐಟಿ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ತನ ಮನೆ ಮೇಲೆ ದಾಳಿ ಮಾಡಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಾಗಲಕೋಟೆ: ಐಟಿ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ಥರ ಮನೆ ಮೇಲೆ ದಾಳಿ!
ಬಾಗಲಕೋಟೆ: ಐಟಿ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ಥರ ಮನೆ ಮೇಲೆ ದಾಳಿ!
Updated on

ಬೆಳಗಾವಿ:  ಐಟಿ ಅಧಿಕಾರಿಗಳ ಸೋಗಿನಲ್ಲಿ ಸಂತ್ರಸ್ತನ ಮನೆ ಮೇಲೆ ದಾಳಿ ಮಾಡಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

2019ರ ಡಿ.23ರಂದು ಈ ಘಟನೆ ನಡೆದಿದ್ದು, ಅಲಗೂರು ಗ್ರಾಮದ ಲಕ್ಷ್ಮಣ್ ಎಂಬುವವರ ಮನೆ ಮೇಲೆ ಐಟಿ ಅಧಿಕಾರಿಗಳ ಸೋಗಿನಲ್ಲಿ ದಾಳಿ ಮಾಡಲಾಗಿದೆ.

ಈ ಸಂದರ್ಭದಲ್ಲಿ ನಕಲಿ ಅಧಿಕಾರಿಗಳು 3 ಮೊಬೈಲ್ ಹಾಗೂ 12,500 ರೂ ಜಪ್ತಿ ಮಾಡಿಕೊಂಡು, ಬಳಿಕ ಬೆಳಗಾವಿಯ ಐಟಿ ಕಚೇರಿಗೆ ಬಂದು ಭೇಟಿಯಾಗುವಂತೆ ಸೂಚಿಸಿ ಪರಾರಿಯಾಗಿದ್ದಾರೆ. ಅವರ ಮಾತನ್ನು ನಂಬಿ ಬೆಳಗಾವಿಗೆ ತೆರಳಿದ ಲಕ್ಶ್ಮಣ್ ತಾವು ಐಟಿ ಕಚೇರಿಗೆ ಭೇಟಿ ಕೊಟ್ಟಾಗಲೇ ಮೋಸ ಹೋಗಿರುವುದು ಬಹಿರಂಗವಾಗಿದೆ.

ಇತ್ತೀಚೆಗೆ ಉಂಟಾಗಿರುವ ನೆರೆ, ಪ್ರವಾಹದಿಂಡ ಸಂತ್ರಸ್ಥರಾಗಿದ್ದ ಲಕ್ಶ್ಮಣ್ ಮನೆಗೆ ಕೋಟಿ ಕೋಟಿ ರು. ಹಣ ಬಂದಿದೆ ಎಂದು ಸುದ್ದಿ ಹಬ್ಬಿತ್ತು. ಇದನ್ನು ನಂಬಿ ನಕಲಿ ಐಟಿ ಅಧಿಕಾರಿಗಳ ದಾಳಿ ನಡೆದಿದೆ ಎನ್ನಲಾಗುತ್ತಿದೆ. ಈ ಸಂಬಂಧ  ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com