ಪುಣೆಯಲ್ಲಿ ಕೊಡಗಿನ ಯೋಧ ಅನುಮಾನಸ್ಪದ ಸಾವು

ಭಾರತೀಯ ಸೇನೆಯಲ್ಲಿ ತರಬೇತಿ ಪಡೆಯುತ್ತಿದ್ದ ಮುಗುಟಗೇರಿ ಗ್ರಾಮದ ಯೋಧ ಚೀರಂಡ ರಚನ್ ಬೋಪಣ್ಣ (22) ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪುಣೆಯ ವಸತಿಗೃಹದಲ್ಲಿ ಗುರುವಾರ ಪತ್ತೆಯಾಗಿದೆ.
ರಚನ್ ಬೋಪಣ್ಣ
ರಚನ್ ಬೋಪಣ್ಣ

ಪೊನ್ನಂಪೇಟೆ: ಭಾರತೀಯ ಸೇನೆಯಲ್ಲಿ ತರಬೇತಿ ಪಡೆಯುತ್ತಿದ್ದ ಮುಗುಟಗೇರಿ ಗ್ರಾಮದ ಯೋಧ ಚೀರಂಡ ರಚನ್ ಬೋಪಣ್ಣ (22) ಅವರ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪುಣೆಯ ವಸತಿಗೃಹದಲ್ಲಿ ಗುರುವಾರ ಪತ್ತೆಯಾಗಿದೆ.

ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು, ಸ್ವಗ್ರಾಮಕ್ಕೆ ರವಾನಿಸಲು ತೊಂದರೆಯಾಗಿದೆ. ಮಧ್ಯಪ್ರದೇಶದ ಜಬಲ್ಪರುದ ಸೇನಾ ಶಿಬಿರದಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

2019ರ ಏಪ್ರಿಲ್ ತಿಂಗಳಲ್ಲಿ ಸೇನೆಗೆ ಸೇರ್ಪಡೆಯಾಗಿದ್ದ, ತರಬೇತಿ ಕೊನೆಯ ಹಂತದಲ್ಲಿದ್ದ ರಚನ್ ಬೋಪಣ್ಣ ಅವರು, ಭಾನುವಾರ ಔಟ್‍ಪಾಸ್ ಪಡೆದು ಶಿಬಿರದಿಂದ ಹೊರಹೋಗಿದ್ದರು. ಮೃತದೇಹದ ಬಳಿ ಡೆತ್‌ನೋಟ್‌ ಪತ್ತೆಯಾಗಿದೆ.

ಇನ್ನು ಯೋಧ ಕಳೆದ ನವೆಂಬರ್ ನಲ್ಲಿ ಕಡೆಯ ಬಾರಿಗೆ ಮನೆಗೆ ಭೇಟಿ ಕೊಟ್ಟಿದ್ದರು. ಇದೀಗ ಘಟನಾ ಸ್ಥಳಕ್ಕೆ ಯೋಧನ ಕುಟುಂಬಿಕರು ತೆರಳಿದ್ದು ಹೆಚ್ಚಿನ ಮಾಹಿತಿ ಬರಬೇಕಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com