ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಷ್ಟ್ರೀಯ ತನಿಖಾ ತಂಡದಿಂದ ನಕಲಿ ನೋಟು ಸಾಗಣೆ ಮಾಡುತ್ತಿದ್ದ ವ್ಯಕ್ತಿ ಬಂಧನ

ಆರ್ ವಿಜಯ್ ಬಂಧಿತ ಆರೋಪಿ, ಕರ್ನಾಟಕದಲ್ಲಿ  ಇಂಡಿಯಾದ ಕರೆನ್ಸಿ ಚಲಾವಣೆಯಲ್ಲಿ ಭಾಗಿಯಾಗಿದ್ದ ಎಂದು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Published on

ಬೆಂಗಳೂರು: ನಕಲಿ ಭಾರತೀಯ ಕರೆನ್ಸಿ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ರಾಷ್ಟ್ರೀಯ ತನಿಖಾ ತಂಡ ಬಂಧಿಸಿದೆ. 

ಆರ್ ವಿಜಯ್ ಬಂಧಿತ ಆರೋಪಿ, ಕರ್ನಾಟಕದಲ್ಲಿ  ಇಂಡಿಯಾದ ಕರೆನ್ಸಿ ಚಲಾವಣೆಯಲ್ಲಿ ಭಾಗಿಯಾಗಿದ್ದ ಎಂದು ರಾಷ್ಟ್ರೀಯ ತನಿಖಾ ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನ್ನ ಸಹ ಆರೋಪಿ ಜೊತೆ ಈತ ಬ್ಯಾಂಕ್ ಅಕೌಂಟ್ ಮೂಲಕ ನಕಲಿ ಹಣ ವರ್ಗಾವಣೆ ಮಾಡುತ್ತಿದ್ದ. ಕೊಲ್ಕೋತಾ. ಮಾಲ್ಡಾ, ಫಾರಕ್ಕಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಈ ದಂಧೆ ನಡೆಯುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಂಧಿತ ಆರೋಪಿಯಿಂದ 6,84,000 ರು ನಕಲಿ ಹಣ ವಶಪಡಿಸಿಕೊಳ್ಳಲಾಗಿದೆ, ಮೊಹಮ್ಮದ್ ಸಜ್ಜಾದ್ ಅಲಿ, ರಾಜು ಎಂ.ಜಿ, ಗಂಗಾಧರ್ ಮತ್ತು ವನಿತಾ ಜೆ ಅಲಿಯಾಸ್ ತಂಗಮ್ ಮಾಲ್ಡಾದಿಂದ ಕರ್ನಾಟಕಕ್ಕೆ 2018 ರ ಸೆಪ್ಟೆಂಬರ್‌ನಲ್ಲಿ ನಕಲಿ ಕರೆನ್ಸಿ ಸಾಗಿಸಿದ್ದ, ಆತನನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿತ್ತು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com