ಮಂಡ್ಯ: ಭತ್ತದ ದಳ್ಳಾಯಿಯೊಬ್ಬ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದು, ಆತನ ಶವ ಹಣ ನೀಡಬೇಕಾದ ವ್ಯಕ್ತಿಯ ಮನೆ ಮುಂದೆಯೇ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಚನ್ನಹಳ್ಳಿ ಗ್ರಾಮದ ದೇವರಾಜು(46) ಅನುಮಾನಸ್ಪದವಾಗಿ ಸಾವಿಗೀಡಾದ ವ್ಯಕ್ತಿಯಾಗಿದ್ದು, ಗಿರೀಶ್ ಎಂಬವರ ಮನೆಯ ಮುಂದೆ ನೇಣು ಬಿಗಿದ ಸ್ಥಿತಿ ಪತ್ತೆಯಾಗಿದೆ. ದೇವರಾಜು ಕಳೆದ ರಾತ್ರಿ ವ್ಯಾಪಾರದ ಹಣ ಪಡೆಯಲು ಅರಕೆರೆ ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ. ಆದರೆ ಮುಂಜಾನೆ ಆತನ ಶವ ಪತ್ತೆಯಾಗಿದೆ.
ಆದರೆ ದೇವರಾಜು ಪೋಷಕರು ಕೊಲೆ ಮಾಡಿ ನೇಣು ಹಾಕಲಾಗಿದೆ ಎಂದು ಆರೊಪಿಸಿ ದೂರು ನೀಡಿದ್ದಾರೆ.ದೇವರಾಜು ಕೊಲೆಗೆ ಕಾರಣ ಎನ್ನಲಾಗಿರುವ ಗಿರೀಶ್ ,ಭತ್ತ ಖರೀದಿಯ ಬಾಬ್ತು ಸುಮಾರು 9 ಲಕ್ಷರೂಗಳನ್ನು ದೇವರಾಜುಗೆ ನೀಡಬೇಕಿತ್ತು, ಈ ಹಣವನ್ನು ವಾಪಸ್ ನೀಡಬೇಕಾಗುತ್ತದೆ ಅನ್ನೋ ಕಾರಕ್ಕೆ ಕೊಲೆ ಮಾಡಿ ,ನೇಣುಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಗಿರೀಶ್ ಮನೆ ಮುಂದೆಯೇ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ದೇವರಾಜು ಶವದ ಕಾಲುಗಳು ನೆಲಕ್ಕೆ ತಾಕುತ್ತಿದ್ದು, ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಅರಕೆರೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
-ನಾಗಯ್ಯ
Advertisement