ಚಾಮರಾಜನಗರ: ಲಾಕ್ಡೌನ್ ಆದರೂ ನಿಯಮ ಉಲ್ಲಂಘಿಸಿ ಅನಗತ್ಯವಾಗಿ ಓಡಾಡುತ್ತಿದ್ದ 20ಕ್ಕೂ ಹೆಚ್ಚು ಮಂದಿಗೆ ರಾತ್ರಿ ಮಂಡಿಯೂರಿ ಕೂರುವ ಶಿಕ್ಷೆ ಅನುಭವಿಸಿದರು.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಹಾಗೂ ಎಸ್ಪಿ ಹೆಚ್.ಡಿ.ಆನಂದಕುಮಾರ್ ಅವರು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಭುವನೇಶ್ವರಿ ವೃತ್ತದಲ್ಲಿ ಅನಗತ್ಯವಾಗಿ 20ಕ್ಕೂ ಹೆಚ್ಚು ಬೈಕ್ ಸವಾರರು ಓಡಾಡುತ್ತಿದ್ದರುಊರು ಸುತ್ತಲು ಬಂದವರಿಗೆ ಶಿಕ್ಷೆ ಕೊಟ್ಟ ಎಸ್, ಡಿಸಿಮತ್ತೆ ಮನೆಯಿಂದ ಹೊರಬಂದರೆ ಕಂಬಿ ಎಣಿಸಬೇಕಾಗುತ್ತದೆ.
ಕೊರೊನಾ ವೈರಸ್ ವಿರುದ್ಧ ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ. ಸರ್ಕಾರದ ನಿಯಮಗಳನ್ನು ಎಲ್ಲರೂ ಪಾಲಿಸಬೇಕು ಎಂದು ಖಡಕ್ ವಾರ್ನಿಂಗ್ ನೀಡಿದರು. ಇನ್ನು ಮುಂದೆ ಅನಗತ್ಯವಾಗಿ ಓಡಾಡುವುದಿಲ್ಲ ಎಂದು ಬೈಕ್ ಸವಾರರಿಂದ ಪ್ರಮಾಣ ಮಾಡಿಸಿಕೊಂಡು ಮನೆಗೆ ಕಳುಹಿಸಿದರು.
ವರದಿ: ಗುಳಿಪುರ ನಂದೀಶ.ಎಂ
Advertisement