ಬೆಂಗಳೂರು: ಕೊರೆನಾ ಸೋಂಕು ತಡೆಯಲು ರಾಜ್ಯ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಕೈಜೋಡಿಸಲು ಹೋಟೆಲ್ ಮಾಲೀಕರು ಸ್ವಯಂ ಪ್ರೇರಿತರಾಗಿ ಮುಂದೆ ಬಂದಿದ್ದು, ಇದೀಗ ರಾಜ್ಯದ ಹಲವು ಹೋಟೆಲ್ ಗಳನ್ನು ಕ್ವಾರಂಟೈನ್ ಗಳನ್ನಾಗಿ ಬಳಕೆ ಮಾಡಲು ಸರ್ಕಾರ ನಿರ್ಧಾರ ಕೈಗೊಂಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ ಹುಬ್ಬಳ್ಳಿಯ ಮೆಟ್ರೋಪೊಲಿಸ್, ಚಾಮರಾಜನಗರದ ನಿಜಗುಣ ರೆಸಿಡೆನ್ಸಿ ಮತ್ತು ತುಮಕೂರಿನ ಎಸ್.ಎಸ್.ರೆಸಿಡೆನ್ಸಿ ಹೋಟೆಲ್ ಗಳ ಮಾಲೀಕರು ಒಟ್ಟಾರೆ ತಮ್ಮ 108 ಕೊಠಡಿಗಳನ್ನು ಕ್ವಾರಂಟೈನ್ ಕೇಂದ್ರಗಳಾಗಿ ಬಳಸಲು ಸರ್ಕಾರಕ್ಕೆ ಒಪ್ಪಿಗೆ ನೀಡಿ ಪತ್ರ ಬರೆದಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಹುಬ್ಬಳ್ಳಿಯ ಕೊಪ್ಟಕರ್ ರಸ್ತೆಯಲ್ಲಿರುವ ಹೋಟೆಲ್ ಉದ್ಯಮಿ ಅಶ್ರಫ್ ಅಲಿ ಬಶೀರ್ ಅಹ್ಮದ್ ಅವರು ತಮ್ಮ ಮೆಟ್ರೋ ಪೊಲೀಸ್ ಹೋಟೆಲ್ ನ ಒಂದು ಭಾಗದ 46 ಕೊಠಡಿಗಳನ್ನು ಕ್ವಾರಂಟೈನ್ ನಲ್ಲಿರುವವರಿಗಾಗಿ ನೀಡಲು ಸಿದ್ಧ ಎಂದು ಹೇಳಿದ್ದಾರೆ.
ಮಾಜಿ ಸಚಿವ, ಬಿಜೆಪಿ ಮುಖಂಡ ಸೊಗಡು ಶಿವಣ್ಣ ಅವರು ತುಮಕೂರಿನ ಬಸ್ ನಿಲ್ದಾಣದ ಬಳಿ 30 ಕೊಠಡಿಯ ಎಸ್ಎಸ್ ರೆಸಿಡೆನ್ಸಿ ಹೋಟೆಲ್, ಚಾಮರಾಜನಗರದ ಜನಪ್ರಿಯ ಹೋಟೆಲ್ ಉದ್ಯಮಿ, ಬಿಜೆಪಿ ಮುಖಂಡ ಜಿ,.ನಿಜಗುಣ ರಾಜುರ 32 ಕೊಠಡಿಗಳ ನಿಜಗುಣ ರೆಸಿಡೆನ್ಸಿಯನ್ನು ಕ್ವಾರಂಟೈನ್ ವಾರ್ಡ್ ಆಗಿ ಪರಿವರ್ತಿಸಿಕೊಳ್ಳುವಂತೆ ಕೇಳಿಕೊಕಂಡಿದ್ದಾರೆ.
ಕೊರೋನಾ ಶಂಕಿತರನ್ನು ಇರಿಸಲು 17 ಸ್ಟಾರ್ ಹೋಟೆಲ್ ಗುರುತಿಸಿದ ಬಿಬಿಎಂಪಿ
ನಗರದಲ್ಲಿ ಕೊರೋನಾ ಸೋಂಕಿನ ಶಂಕಿತರನ್ನು ಪ್ರತ್ಯೇಕವಾಗಿರಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 3 ಸ್ಟಾರ್ ಮಟ್ಟದ 17 ಹೋಟೆಲ್ ಗಳನ್ನು ಗುರುತಿಸಿದೆ.
Hotel name | Location | Rooms | Contact |
Sabarwal Residency | Sudamanagar | 50 | 9535545654 |
Emirates Hotel | BTM layout | 40 | 9902156509 |
Empire | Koramangala 5th Block | 39 | 9964024514 |
Silicrest | Koramangala 4th Block | 30 | 9743658258 |
Oyo Amethyst | Jayanagar 5th Block | 32 | 9945815408 |
Ramakrishna Lodge | Gandhinagar | 200 | 9966670215 |
Hotel Citadel | Anand Rao Circle | 111 | 080 424042222 |
Likith International | Gandhinagar | 70 | 9886605538 |
Fortune Park JP Celestial | Sampangiramanagara | 129 | 9980072233 |
Arafa Inn | Gandhinagar | 46 | 9844404411 |
Lemon Tree Premier | Ulsoor | 60 | 9686453398 |
Keys Select | Hosur Road | 120 | 9686392804 |
Chalukya Hotel | Chalukya circle | 70 | 9845292804 |
Sri Lakshmi PG | Domlur | 27 | 9108764221 |
Trinity Wood Hotel | ITPL Main Road | 25 | 9844003230 |
Keys Select Whitefield | ITPL Main Road | 220 | 220- 9686353398 |
Oyo Town | near Ulsoor lake | 28 | 7338523838 |
ಕೋವಿಡ್ -19 ಶಂಕಿತರನ್ನು ಪರೀಕ್ಷೆಗೊಳಪಡಿಸಿ, ಅದರ ವರದಿ ಬರುವರೆಗೆ ಅಂದರೆ ಗರಿಷ್ಠ ಎರಡು ದಿನಗಳ ಕಾಲ ಈ ಹೋಟೆಲ್ ಗಳಲ್ಲಿ ಪ್ರತ್ಯೇಕವಾಗಿರಿಸಲಾಗುವುದು. ಈ ಹೋಟೆಲ್ ಗಳಲ್ಲಿರುವ ಹವಾನಿಯಂತ್ರಿತ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವಂತೆ ಸೂಚನೆ ನೀಡಲಾಗಿದೆ.
ಈ ಶಂಕಿತ ವ್ಯಕ್ತಿಗಳ ಸಂಖ್ಯೆಗಳಿಗನುಗುಣವಾಗಿ ಕರ್ನಾಟಕ ವಿಪತ್ತು ನಿರ್ವಹಣಾ ಪ್ರಾಧಿಕಾರ ನಿಗದಿಪಡಿಸಿ ದರವನ್ನು ಪಾವತಿಸಲಾಗುವುದು ಎಂದು ಬಿಬಿಎಂಪಿ ತಿಳಿಸಿದೆ.
Advertisement