ಬಳ್ಳಾರಿ: ಪತಿ ಕುಡಿತದ ಚಟಕ್ಕೆ ಬೇಸತ್ತ ಪತ್ನಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಧಾರುಣ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ತಾಂಡದಲ್ಲಿ ಈ ಘಟನೆ ನಡೆದಿದ್ದು, ಮೀನಾಕ್ಷಿ (30 ವರ್ಷ) ಸಾವಿಗೀಡಾದ ಮಹಿಳೆ. ಮೀನಾಕ್ಷಿ ಗಂಡ ಕುಡಿತದ ದಾಸನಾಗಿದ್ದು, ಪತ್ನಿ ಎಷ್ಟೇ ಬುದ್ಧಿವಾದ ಹೇಳಿದರೂ ಕುಡಿತ ಬಿಡುತ್ತಿರಲಿಲ್ಲ. ಕುಡಿತವನ್ನ ಬಿಡುವಂತೆ ಪತಿಗೆ ಪರಿ ಪರಿಯಾಗಿ ಮೀನಾಕ್ಷಿ ಬೇಡಿಕೊಂಡಿದ್ದಳು. ಆದರೆ ಅದಕ್ಕೆ ಪತಿ ಮಹಾಶಯ ಸೊಪ್ಪುಹಾಕುತ್ತಿರಲಿಲ್ಲ.
ಇತ್ತೀಚೆಗೆ ಕೊರೊನಾ ಲಾಕ್ ಡೌನ್ ನಂತರ ವೈನ್ ಶಾಪ್ ಪ್ರಾರಂಭವಾದ ಮೇಲೆ ಗಂಡನ ಕುಡಿತ ಹೆಚ್ಚಾಗಿತ್ತು, ಇದರಿಂದ ಬೇಸತ್ತು ಮನೆಯಲ್ಲಿ ವಿಷ ಸೇವಿಸಿ ಆತ್ಮ ಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಅಸ್ವಸ್ಥ ಮಹಿಳೆಯನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆಕೆ ನಿನ್ನೆ ಸಾವನ್ನಪ್ಪಿದ್ದಾಳೆ, ಪ್ರಸ್ತುತ ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement