ಗಂಧದ ಮರ ಕಳುವು ಮಾಡಲು ವೃದ್ಧನನ್ನೇ ಕೊಲೆಗೈದ ಶ್ರೀಗಂಧ ಕಳ್ಳರು

ಮನೆ ಮುಂದಿದ್ದ ಶ್ರೀಗಂಧದ ಮರವನ್ನು ಕದಿಯಲು ಬಂದ ಖದೀಮರು ವೃದ್ಧನನ್ನು ಕೊಂದಿರುವ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚಾಮರಾಜನಗರ: ಮನೆ ಮುಂದಿದ್ದ ಶ್ರೀಗಂಧದ ಮರವನ್ನು ಕದಿಯಲು ಬಂದ ಖದೀಮರು ವೃದ್ಧನನ್ನು ಕೊಂದಿರುವ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿಯಲ್ಲಿ ನಡೆದಿದೆ.

ಚಂದಕವಾಡಿ ಗ್ರಾಮದ ವೃದ್ಧ ಶಿವಬಸಪ್ಪ(75) ಕೊಲೆಯಾದವರು. ಮನೆ ಮುಂದೆ ಇದ್ದ ಶ್ರೀಗಂಧದ ಮರವನ್ಬು ಕದಿಯಲು ಬಂದಿದ್ದ ವೇಳೆ ಮನೆ ಹೊರಗಡೆ ಮಲಗಿದ್ದ ವೃದ್ಧ ಶಿವಬಸಪ್ಪನ ಕೈ-ಕಾಲು ಕಟ್ಟಿ, ಪಂಚೆಯಿಂದ ಉಸಿರುಗಟ್ಟಿಸಿ ಕೊಂದು ಮಾಳವೊಂದರಲ್ಲಿ ಬಿಸಾಡಿದ್ದಾರೆ ಎಂದು ತಿಳಿದುಬಂದಿದೆ.

ಶ್ವಾನದಳ ವೃದ್ಧನ ಮೃತದೇಹ ಪತ್ತೆ ಮಾಡಿದೆ. ಕಳ್ಳರು ಶ್ರೀಗಂಧದ ಮರವನ್ನು ಅರ್ಧ ಕತ್ತರಿಸಿ ಪರಾರಿಯಾಗಿದ್ದಾರೆ. ಚಾಮರಾಜನಗರ ನಗರದ ರಾಮಸಮುದ್ರ ಪೂರ್ವ ಪೂರ್ವ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ವರದಿ: ಗುಳಿಪುರ ನಂದೀಶ .ಎಂ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com