ಕಾಡಾನೆ ದಾಳಿ: ಸಕ್ರೆಬೈಲು ಬಿಡಾರದ ಆಕರ್ಷಣೆಯ ಕೇಂದ್ರಬಿಂದುವಾಗಿದ್ದ ದೈತ್ಯ ಆನೆ 'ರಂಗ' ಸಾವು!

ಸರಪಳಿಯಿಂದ ಕಟ್ಟಿಹಾಕಿದ್ದರಿಂದ ಅಸಾಹಯವಾಗಿ ನಿಂತ ಸಕ್ರೆಬೈಲು ಬಿಡಾರದ ಆನೆ ರಂಗ ಕಾಡಾನೆ ದಂತ ತಿವಿತದಿಂದ ಮೃತಪಟ್ಟಿದೆ. 
ಆನೆ ರಂಗ
ಆನೆ ರಂಗ
Updated on

ಶಿವಮೊಗ್ಗ: ಸರಪಳಿಯಿಂದ ಕಟ್ಟಿಹಾಕಿದ್ದರಿಂದ ಅಸಾಹಯವಾಗಿ ನಿಂತ ಸಕ್ರೆಬೈಲು ಬಿಡಾರದ ಆನೆ ರಂಗ ಕಾಡಾನೆ ದಂತ ತಿವಿತದಿಂದ ಮೃತಪಟ್ಟಿದೆ. 

35 ವರ್ಷದ ದೈತ್ಯ ಆನೆ ರಂಗ ಸಕ್ರೆಬೈಲು ಬಿಡಾರದ ಆಕರ್ಷಣೆಯಾಗಿತ್ತು. ಕಳೆದ ರಾತ್ರಿ ಬಿಡಾರಕ್ಕೆ ನುಗ್ಗಿದ ಕಾಡಾನೆಯೊಂದು ಏಕಾಏಕಿ ರಂಗ ಆನೆಯ ಮೇಲೆರಗಿದೆ. ಸರಪಳಿಯಿಂದ ಕಟ್ಟಿ ಹಾಕಿದ್ದರಿಂದ ಪ್ರತಿರೋಧ ತೋರಲಾಗದೆ ರಂಗ ಸುಮ್ಮನೆ ನಿಂತಿದೆ. 

ಪ್ರತಿರೋಧ ತೋರದ ರಂಗನ ಮೇಲೆ ಕಾಡಾನೆ ಆಕ್ರೋಶಭರಿತವಾಗಿ ದಾಳಿ ಮಾಡಿದ್ದು ದಂತ ತಿವಿತಕ್ಕೆ ಬಲಿಯಾಗಿದೆ. 

ರಂಗ ಆನೆ ದೈತ್ಯವಾಗಿದ್ದರಿಂದ ಎಲ್ಲರ ಗಮನ ಸೆಳೆಯುತ್ತಿತ್ತು. ಇನ್ನು ಸಕ್ರೆಬೈಲು ಕ್ಯಾಂಪ್ ನಲ್ಲಿದ್ದ ಗೀತಾ ಹೆಸರಿನ ಆನೆಗೆ ಹುಟ್ಟಿದ್ದ ರಂಗ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com