ನಾಲ್ವರು ಎಂಜಿನಿಯರ್'ಗಳ ನೇಮಕ ಆದೇಶ ಮರುಪರಿಶೀಲಿಸಿ: ನಗರಾಭಿವೃದ್ಧಿ ಇಲಾಖೆಗೆ ಬಿಬಿಎಂಪಿ ಆಯುಕ್ತ ಪತ್ರ

ನಾಲ್ವರು ಎಂಜಿನಿಯರ್ ಗಳನ್ನು ಮತ್ತೆ ಬಿಬಿಎಂಪಿಗೆ ನೇಮಿಸಿರುವ ಆದೇಶದ ಕುರಿತು ಸ್ಪಷ್ಟನೆಗಳನ್ನು ನೀಡಿ ಎಂದು ಸರ್ಕಾರಕ್ಕೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಪತ್ರ ಬರೆದಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರು: ನಾಲ್ವರು ಎಂಜಿನಿಯರ್ ಗಳನ್ನು ಮತ್ತೆ ಬಿಬಿಎಂಪಿಗೆ ನೇಮಿಸಿರುವ ಆದೇಶದ ಕುರಿತು ಸ್ಪಷ್ಟನೆಗಳನ್ನು ನೀಡಿ ಎಂದು ಸರ್ಕಾರಕ್ಕೆ ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಅವರು ಪತ್ರ ಬರೆದಿದ್ದಾರೆ. 

ಈ ಕುರಿತು ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿರುವ ಅವರು, ಮಲ್ಲೇಶ್ವರ, ಗಾಂಧಿನಗರ, ರಾಜರಾಜೇಶ್ವರಿ ನಗರ ವಿಭಾಗದ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ನ್ಯಾಯಮೂರ್ತಿ ನಾಗಮೋಹನ್ ದಾರ್ ವರದಿಯಲ್ಲಿ ಉಲ್ಲೇಖಿಸಿದ ನಾಲ್ವರು ಎಂಜಿನಿಯರ್ ಗಳನ್ನು ಈ ಹಿಂದೆ ವಜಾಗೊಳಿಸಲಾಗಿತ್ತು. ಇದೀಗ ಮತ್ತೆ ನಾಲ್ವರು ಎಂಜಿನಿಯರ್ ಗಳನ್ನು ನೇಮಿಸಲಾಗಿದ್ದು. ಈ ಆದೇಶವನ್ನು ಮರುಪರಿಶೀಲಿಸುವಂತೆ ತಿಳಿಸಿದ್ದಾರೆಂದು ತಿಳಿದುಬಂದಿದೆ. 

ಅಕ್ರಮದಲ್ಲಿ ಭಾಗಿಯಾಗಿ ತಪ್ಪಿತಸ್ಥರು ಎಂದು ಗುರುತಿಸಲ್ಪಟ್ಟ ಎಂಜಿನಿಯರ್ ಗಳಾದ ಡಿ.ಹರೀಶ್ ಕುಮಾರ್, ವಿ.ಮೋಹನ್, ಜಿ.ಆರ್.ಕುಮಾರ್, ಎನ್.ಎಸ್.ರೇವಣ್ಣ ಅವರನ್ನು ಈಗಾಗಲೇ ಬಿಬಿಎಂಪಿ ಸೇವೆಯಿಂದ ಬಿಡುಗಡೆ ನೀಡಲಾಗಿದೆ ಎಂದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com