ಗಾಂಜಾ ಬೆಳೆಯುವವರಿಗೆ ಪಶ್ಚಿಮ ಘಟ್ಟದ ತಪ್ಪಲು ಸುರಕ್ಷಿತ ಸ್ವರ್ಗ: ಅಕ್ರಮ ಪತ್ತೆಗೆ ಸಜ್ಜಾಗಿದೆ ಅರಣ್ಯ ಇಲಾಖೆ

ಕರ್ನಾಟಕದಲ್ಲಿ ಗಾಂಜಾ ಬೆಳೆ ಬೆಳೆಯುವ ಬಗ್ಗೆ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಡ್ರಗ್ ಕೇಸು ವ್ಯಾಪಕವಾಗಿ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ಅರಣ್ಯ ಇಲಾಖೆ ಅರಣ್ಯ ಪ್ರದೇಶಗಳ ಸುತ್ತಮುತ್ತ ತಪಾಸಣೆಗೆ ಮುಂದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕರ್ನಾಟಕದಲ್ಲಿ ಗಾಂಜಾ ಬೆಳೆ ಬೆಳೆಯುವ ಬಗ್ಗೆ ಅಲ್ಲಲ್ಲಿ ವರದಿಯಾಗುತ್ತಲೇ ಇದೆ. ಡ್ರಗ್ ಕೇಸು ವ್ಯಾಪಕವಾಗಿ ಸದ್ದು ಮಾಡುತ್ತಿರುವ ಈ ಹೊತ್ತಿನಲ್ಲಿ ಅರಣ್ಯ ಇಲಾಖೆ ಅರಣ್ಯ ಪ್ರದೇಶಗಳ ಸುತ್ತಮುತ್ತ ತಪಾಸಣೆಗೆ ಮುಂದಾಗಿದೆ. ನಿನ್ನೆ ಬಿಳಿಗಿರಿ ರಂಗಸ್ವಾಮಿ ದೇವಸ್ಥಾನ ಹುಲಿ ಅಭಯಾರಣ್ಯ ಸುತ್ತಮುತ್ತ ಗಾಂಜಾ ಬೆಳೆಯುವ ಬಗ್ಗೆ ಅರಣ್ಯ ಇಲಾಖೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಚುರುಕಾಗಿದೆ.

ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಮಾಹಿತಿ ನೀಡಿದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ, ಅಕ್ರಮ ಬೇಟೆ ನಿಗ್ರಹ ಸಿಬ್ಬಂದಿ ಮತ್ತು ಇತರ ಸಿಬ್ಬಂದಿಗಳು ಅಕ್ರಮವಾಗಿ ಗಾಂಜಾ ಬೆಳೆಯುವವರನ್ನು ಪತ್ತೆಹಚ್ಚಿದ್ದಾರೆ. ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ತೀವ್ರ ತಪಾಸಣೆ ಅತ್ಯಗತ್ಯವಾಗಿದೆ. ಗಾಂಜಾ ಬೆಳೆಯುವವರಿಗೆ ಅರಣ್ಯ ಪ್ರದೇಶ ಅತ್ಯಂತ ಸುರಕ್ಷಿತ ಸ್ವರ್ಗವೆನಿಸುತ್ತಿದೆ. ಅಲ್ಲಿ ತಪಾಸಣೆ ಮಾಡಬೇಕಾಗಿದೆ ಎಂದರು. 

ಕೇರಳ ಮತ್ತು ತಮಿಳು ನಾಡು ರಾಜ್ಯಗಳ ಜನರು ಗಾಂಜಾ ಬೆಳೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ. ದಟ್ಟ ಅರಣ್ಯದೊಳಗೆ ಇದನ್ನು ಬೆಳೆಯಲಾಗುತ್ತಿದೆ. ವಾಣಿಜ್ಯ ಉದ್ದೇಶಕ್ಕೆ ಮತ್ತು ಖಾಸಗಿ ಬಳಕೆಗೆ ಗಾಂಜಾ ಬೆಳೆಗೆ ಜನರು ಒಲವು ತೋರಿಸುತ್ತಿದ್ದು ಅರಣ್ಯ ಪ್ರದೇಶಗಳ ಬುಡಕಟ್ಟು ಜನಾಂಗ ಮತ್ತು ಸ್ಥಳೀಯರು ಇದಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗಾಂಜಾವನ್ನು ಕಳೆಗಳಂತೆ ಬೆಳೆಯುವುದರಿಂದ ಇಲಾಖೆಯೂ ಆತಂಕಕ್ಕೊಳಗಾಗುತ್ತದೆ, ಒಂದು ಬೆಳೆ ತೆಗೆದರೆ ಉಳಿದವು ತಾನಾಗಿಯೇ ಬೆಳೆಯುತ್ತದೆ. ಅಕ್ರಮವಾಗಿ ಬೆಳೆಸುವ ಬಗ್ಗೆ ಸೂಕ್ತ ತನಿಖೆ ಮಾಡಬೇಕಿದೆ. ಕೆಲವು ಬುಡಕಟ್ಟು ಜನಾಂಗದವರು ತಮ್ಮ ಬಳಕೆಗಾಗಿ ಗಾಂಜಾವನ್ನು ಬೆಳೆಯುತ್ತಾರೆ ಎಂಬ ಮಾಹಿತಿಯೂ ಇದೆ, ಮತ್ತು ಅದನ್ನು ಎಲ್ಲಿ ಬೆಳೆಯಲಾಗುತ್ತಿದೆ ಎಂಬುದನ್ನು ಕಂಡುಹಿಡಿಯಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ದಂಧೆಯನ್ನು ತಳಮಟ್ಟದಲ್ಲಿಯೇ ಬೇಧಿಸಬೇಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಪೊಲೀಸರು ಬುಡಕಟ್ಟು ಜನಾಂಗದವರನ್ನು ಬಂಧಿಸಿ 26 ಕೆಜಿ ಗಾಂಜಾ ವಶ: ಚಾಮರಾಜನಗರ ತಾಲ್ಲೂಕಿನಲ್ಲಿ ತನ್ನ ಹೊಲಗಳಲ್ಲಿ 26.8 ಕೆಜಿ ಗಾಂಜಾ ಬೆಳೆದಿದ್ದ ಬೆಲವಥ ಗ್ರಾಮದ ಬುಡಕಟ್ಟು ಜನಾಂಗದ ವ್ಯಕ್ತಿಯನ್ನು ಬಂಧಿಸಲಾಗಿದೆ. ಅವರು 134 ಗಾಂಜಾ ಸಸಿಗಳನ್ನು ಬೆಳೆಸಿದ್ದರು, ಚಾಮರಾಜನಗರ ಪಶ್ಚಿಮ ಪೊಲೀಸರು ಸುಳಿವು ನೀಡಿ ಹೊಲಗಳ ಮೇಲೆ ದಾಳಿ ನಡೆಸಿ ಪೊಲೀಸರು ಜಡೆ ಗೌಡನನ್ನು ಬಂಧಿಸಿದ್ದಾರೆ. ಅಪರಾಧದಲ್ಲಿ ಜಡೇಗೌಡನಿಗೆ ಸಹಾಯ ಮಾಡಿದ ಮದಯ್ಯನನ್ನು ಹುಡುಕುತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com