ಗಂಗಾವತಿ: ಅಂಗಳದಲ್ಲಿ ಆಟವಾಡಿಕೊಂಡಿದ್ದ ಮಗುವಿಗೆ ದ್ರಾವಣ ಹಾಕಿ ಪರಾರಿಯಾದ ದುಷ್ಕರ್ಮಿಗಳು

ಆಟವಾಡಿಕೊಂಡಿದ್ದ ಎರಡು ವರ್ಷದ ಪುಟ ಬಾಲಕನೊಬ್ಬನಿಗೆ ಅಪರಿಚಿತ ವ್ಯಕ್ತಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಹಾಡುಹಗಲೆ ಬಾಯಿಕೆ ಯಾವುದೋ ದ್ರಾವಣ ಹಾಕಿ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಗಂಗಾವತಿ: ಆಟವಾಡಿಕೊಂಡಿದ್ದ ಎರಡು ವರ್ಷದ ಪುಟ ಬಾಲಕನೊಬ್ಬನಿಗೆ ಅಪರಿಚಿತ ವ್ಯಕ್ತಿಗಳಿಬ್ಬರು ದ್ವಿಚಕ್ರ ವಾಹನದಲ್ಲಿ ಆಗಮಿಸಿ ಹಾಡುಹಗಲೆ ಬಾಯಿಕೆ ಯಾವುದೋ ದ್ರಾವಣ ಹಾಕಿ ಪರಾರಿಯಾದ ಘಟನೆ ನಗರದಲ್ಲಿ ನಡೆದಿದೆ. 

ನಗರದ ಕೇಂದ್ರ ಬಸ್ ನಿಲ್ದಾಣದ ಹಿಂದಿರುವ ವಿವೇಕಾನಂದ ಕಾಲೋನಿ  ನಿವಾಸಿ ಬಸಯ್ಯ ಹಿರೇಮಠ ಎಂಬುವವರ ಮಗ ಸಿದ್ಧಾರ್ಥ ಎಂಬ ಪುಟ್ಟ ಬಾಲಕನಿಗೆ ಅಪರಿಚತ ದುಷ್ಕರ್ಮಿಗಳು ಲಸಿಕೆ ಹಾಕಿ ಪರಾರಿಯಾಗಿದ್ದಾರೆ.    

ತನ್ನ ಅಕ್ಕ ಶ್ರೇಯಾ ಹಿರೇಮಠ ಜೊತೆ ಮನೆಯ ಅಂಗಳದಲ್ಲಿ ಆಟವಾಡಿಕೊಂಡಿದ್ದ ಮಗುವಿಗೆ, ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಅಪರಿಚಿತರು ಚಾಕೊಲೆಟ್ ಕೊಡುವುದಾಗಿ ಬಾಯಿ ತೆಗೆಯಿಸಿ ಎರಡು ಹನಿ ಯಾವುದೋ ಲಸಿಕೆ ಹಾಕಿ ಪರಾರಿಯಾಗಿದ್ದಾರೆ. 

ಘಟನೆ ಗಮನಕ್ಕೆ ಬರುತ್ತಿದ್ದಂತೆಯೆ ಪಾಲಕರು ಕೂಡಲೆ ಮಗುವನ್ನು ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಈ ಬಗ್ಗೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಪೊಲೀಸ್ ಠಾಣೆಗೆ ಎಂಎಲ್ಸಿ ವರದಿ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com