ಬೆಂಗಳೂರು: ರಾಮನಗರ ಎಪಿಎಂಸಿ ಮಾರುಕಟ್ಟೆಯಲ್ಲಿ ಎಸ್ ಟಿ ಸೋಮಶೇಖರ್ ಮಾಡಿದ ತಪ್ಪನ್ನೇ ಬೆಂಗಳೂರಿನಲ್ಲಿ ವಿ ಸೋಮಣ್ಣ ಪುನಾರಾವರ್ತಿಸಿದ್ದಾರೆ. ಮೂಡಲ ಪಾಳ್ಯದಲ್ಲಿ ಕೆಮಿಕಲ್ ಟನಲ್ ಉದ್ಘಾಟನೆಯ ವೇಳೆ ವಸತಿ ಸಚಿವ ವಿ.ಸೋಮಣ್ಣ ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದ್ದಾರೆ.
ಬೆಂಗಳೂರಿನ ಮೂಡಲಪಾಳ್ಯದಲ್ಲಿ ಈ ಘಟನೆ ನಡೆದಿದ್ದು, ವಸತಿ ಸಚಿವ ವಿ.ಸೋಮಣ್ಣ ಕೆಮಿಕಲ್ ಟನಲ್ ಉದ್ಘಾಟನೆ ಮಾಡಿದ್ದಾರೆ. ಆ ವೇಳೆ ಆಗಮಿಸಿದ ಜನರು ಗುಂಪು ಸೇರಿದ್ದರು. ಒಬ್ಬ ಜವಾಬ್ದಾರಿಯುತ ಸಚಿವರಾಗಿದ್ದರೂ ವಿ.ಸೋಮಣ್ಣ ಜನ ಗುಂಪಾಗಿ ಸೇರಿದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸದೆ ಸುಮ್ಮನೆ ನಿಂತಿದ್ದರು ಎಂದು ಆರೋಪ ಕೇಳಿಬಂದಿದೆ.
ಯಡಿಯೂರಪ್ಪ ಸಂಪುಟದ ಹಿರಿಯ ಸಚಿವರಾಗಿರುವ ಸೋಮಣ್ಣ ಮಾಸ್ಕ್ ಧರಿಸಿದ್ದರು, ಆದರೆ ಅವರು ಸುತ್ತ ನೆರೆದಿದ್ದವರು ಮಾಸ್ಕ್ ಧರಿಸಿರಲಿಲ್ಲ ಹಾಗೂ ಸೋಮಣ್ಣ ಅವರನ್ನು ಸುತ್ತುವರಿದಿದ್ದರು. ಈ ವೇಳೆ ಸೋಮಣ್ಣ ಅವರನ್ನು ದೂರ ಹೋಗುವಂತೆ ಹೇಳಲಿಲ್ಲ.
Advertisement