ಹುಡುಗಿ ಚುಡಾಯಿಸಿದ್ದ ಆರೋಪ: ಹಾಸ್ಟೆಲ್ ನುಗ್ಗಿ ದಾಂದಲೆ ನಡೆಸಿದ ಯುವಕರ ಗುಂಪು

ಯುವತಿಯೊಬ್ಬಳನ್ನು ಚುಡಾಸಿದ ಕಾರಣಕ್ಕೆ ಯುವಕರ ಗುಂಪೊಂದು ಹಾಸ್ಟೆಲ್'ಗೆ ನುಗ್ಗಿ ದಾಂದಲೆ ನಡೆಸಿ ವಸತಿ ನಿಲಯದ ಕಿಟಕಿ ಗಾಜುಗಳನ್ನೆಲ್ಲಾ ಪುಡಿ ಪುಡಿ ಮಾಡಿರುವ ಘಟನೆ ಸಂಗಮೇಶ್ವರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಯುವತಿಯೊಬ್ಬಳನ್ನು ಚುಡಾಸಿದ ಕಾರಣಕ್ಕೆ ಯುವಕರ ಗುಂಪೊಂದು ಹಾಸ್ಟೆಲ್'ಗೆ ನುಗ್ಗಿ ದಾಂದಲೆ ನಡೆಸಿ ವಸತಿ ನಿಲಯದ ಕಿಟಕಿ ಗಾಜುಗಳನ್ನೆಲ್ಲಾ ಪುಡಿ ಪುಡಿ ಮಾಡಿರುವ ಘಟನೆ ಸಂಗಮೇಶ್ವರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಹಾಸ್ಟೆಲ್ ನಲ್ಲಿ ನಡೆದಿದೆ. 

ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, 8-10 ಯುವಕರ ತಂಡ ಹಾಸ್ಟೆಲ್ ನಲ್ಲಿ ದಾಂಧಲೆ ನಡೆಸಿರುವುದು ಕಂಡು ಬಂದಿದೆ. 

ಹಾಸ್ಟೆಲ್'ಗೆ ನುಗ್ಗಿರುವ ಯುವಕರು ಕಲ್ಲು ತೂರಾಟ ನಡೆಸಿದ್ದಾರೆ. ಅಲ್ಲದೆ, ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆ ವೇಳೆ ವಿದ್ಯಾರ್ಥಿಗಳು ದಾಳಿಯ ಹಿಂದಿನ ಕಾರಣ ತಿಳಿದಿಲ್ಲ ಎಂದು ಹೇಳಿಕೆ ನೀಡಿದ್ದಾರೆಂದು ತಿಳಿದುಬಂದಿದೆ. 

ಆದರೆ, ಮೂಲಗಳ ಪ್ರಕಾರ ಹಾಸ್ಟೆಲ್'ನ ಕೆಲ ವಿದ್ಯಾರ್ಥಿಗಲು ಯುವತಿಯೊಬ್ಬಳನ್ನು ಚುಡಾಯಿಸಿದ್ದು, ಇದರಿಂದ ಕೆಂಡಾಮಂಡಲಗೊಂಡಿರುವ ಸ್ಥಳೀಯ ಯುವಕರು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಇದಾವುದಕ್ಕೂ ಕಿವಿಗೊಡದ ಹಾಸ್ಟೆಲ್ ವಿದ್ಯಾರ್ಥಿಗಳು ಮತ್ತೆ ಮತ್ತ ಚಾಳಿಯನ್ನು ಮುಂದುವರೆಸಿದ್ದಾರೆ. ಇದರಿಂದ ಆಕ್ರೋಶಗೊಂಡು ಯುವಕರ ಗುಂಪು ಹಾಸ್ಟೆಲ್ ಮೇಲೆ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com