ಬಳ್ಳಾರಿ: ಟ್ರಾಕ್ಟರ್ ಪಲ್ಟಿಯಾಗಿ ನಾಲ್ಕು ಮಂದಿ ಸ್ಥಳದಲ್ಲೇ ಸಾವು

ಟ್ರಾಕ್ಟರ್ ನ ಆಕ್ಸೆಲ್ ತುಂಡಾಗಿ ಮುಂದಿನ ಎರಡು ಗಾಲಿಗಳು ಏಕಾಏಕಿ ಕಿತ್ತುಹೋದ ಪರಿಣಾಮ ಟ್ರಾಕ್ಟರ್ ಪಲ್ಟಿಯಾಗಿ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಂತೆಬೆನ್ನೂರು ಕ್ರಾಸ್ ಬಳಿ ಗುರುವಾರ ನಡೆದಿದೆ.
ಅಪಘಾತಕ್ಕಿಡಾದ ಟ್ರಾಕ್ಟರ್
ಅಪಘಾತಕ್ಕಿಡಾದ ಟ್ರಾಕ್ಟರ್

ಬಳ್ಳಾರಿ: ಟ್ರಾಕ್ಟರ್ ನ ಆಕ್ಸೆಲ್ ತುಂಡಾಗಿ ಮುಂದಿನ ಎರಡು ಗಾಲಿಗಳು ಏಕಾಏಕಿ ಕಿತ್ತುಹೋದ ಪರಿಣಾಮ ಟ್ರಾಕ್ಟರ್ ಪಲ್ಟಿಯಾಗಿ ನಾಲ್ಕು ಮಂದಿ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕಾಂತೆಬೆನ್ನೂರು ಕ್ರಾಸ್ ಬಳಿ ಗುರುವಾರ ನಡೆದಿದೆ.

ಇಂದು ದಾಸನಹಳ್ಳಿ ಗ್ರಾಮದಿಂದ ಬಿರಬ್ಬಿ ಗ್ರಾಮಕ್ಕೆ ಮದುವೆ ಕಾರ್ಯಕ್ರಮಕ್ಕೆ ಹೋಗಿ, ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದ್ದು, ಟ್ರಾಕ್ಟರ್ ನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳುಗಳನ್ನು ಹೂವಿನಹಡಗಲಿ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಕ್ಕಪ್ಪನವರ್ ವೀರಣ್ಣ(35), ಅಂಗಡಿ ಗೀತ (40), ಎಸ್.ಸುನಿತಾ (30) ಹಾಗೂ ಕಾಳಮ್ಮ ಹೆಚ್ (50) ಮೃತ ದುರ್ದೈವಿಗಳು.

ಹಿರೇಹಡಗಲಿ ಪೊಲೀಸರು ಸ್ಥಳಕ್ಕೆ ಬೇಟಿ‌ ಪರಿಸೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com