ಬಾಗಲಕೋಟೆ: ಎರಡು ವಾರಗಳ ಕಾಲ ಕ್ವಾರಂಟೈನ್ ನಲ್ಲಿರಬೇಕೆಂಬ ಭಯದಿಂದಾಗಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಚಿಕ್ಕೂರು ಗ್ರಾಮದಲ್ಲಿ ನಡೆದಿದೆ.
40 ವರ್ಷದ ತುಕಾರಾಂ ಲಮಾಣಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ, ಈತ ಯಾದಗಿರಿ ಮೂಲದವನು, ಕೂಲಿ ಕಾರ್ಮಿಕನಾದ ಈತ,ಮಹಾರಾಷ್ಚ್ರದಿಂದ ವಾಪಸ್ ಬಂದಿದ್ದ,
ಮೇ 15 ರಂದು ಆತನ ಮನೆಗೆ ತೆರಳಿದ್ದ ಆಶಾ ಕಾರ್ಯಕರ್ತೆಯರು 14 ದಿನಗಳ ಕ್ವಾರಂಟೈನ್ ನಲ್ಲಿರಬೇಕೆಂದು ಸೂಚಿಸಿದ್ದರು. ಚೆಕ್ ಅಪ್ ಭಯದಿಂದಾಗಿ ಚಿಕ್ಕೂರಿಗೆ ವಾಪಾಸಾದ ಲಮಾಣಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ, ಆತನನ್ನು ಮುಧೋಳದ ಆಸ್ಪತ್ರೆಗೆ ದಾಖಲಿಸಲಾಗಿದೆ.
Advertisement