ಕೊವಿಡ್-19 ನಿಯಮದಿಂದ ಗಡಿ ದಾಟದೆ ಚೆಕ್​ಪೋಸ್ಟ್​ನಲ್ಲೇ ಮದುವೆಯಾದ ತಮಿಳ್ಗನ್ನಡಿಗರು!

ಅಂತರರಾಜ್ಯ ಗಡಿದಾಟದೆ ಎರಡೂ ರಾಜ್ಯಗಳ ಗಡಿಯಲ್ಲೇ ಜೋಡಿಯೊಂದು ಮದುವೆಯಾದ ಘಟನೆ ತಮಿಳುನಾಡಿನ ಪುಣಜನೂರು ಚೆಕ್​ಪೋಸ್ಟ್​​ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಚಾಮರಾಜನಗರ: ಅಂತರರಾಜ್ಯ ಗಡಿದಾಟದೆ ಎರಡೂ ರಾಜ್ಯಗಳ ಗಡಿಯಲ್ಲೇ ಜೋಡಿಯೊಂದು ಮದುವೆಯಾದ ಘಟನೆ ತಮಿಳುನಾಡಿನ ಪುಣಜನೂರು ಚೆಕ್​ಪೋಸ್ಟ್​​ನಲ್ಲಿ ನಡೆದಿದೆ.

ಕರ್ನಾಟಕದ ಮತ್ತು ತಮಿಳುನಾಡು ರಾಜ್ಯಗಳ ಜೋಡಿಯೊಂದು ಅಂತರರಾಜ್ಯ ಗಡಿದಾಟದೆ ಪುಣಜನೂರು ಚೆಕ್​ಪೋಸ್ಟ್​​​ನ ಬಾರ್ಡರ್​ನಲ್ಲೇ ಮದುವೆಯಾಗಿದ್ದಾರೆ. ಬಳಿಕ ವಧು-ವರರು ತಮ್ಮ-ತಮ್ಮ ಊರಿಗೆ ತೆರಳಿದ್ದಾರೆ‌.

ಅಂತರ್​ ರಾಜ್ಯ ಪ್ರವೇಶಕ್ಕೆ ನಿರ್ಬಂಧ ಇರುವುದರಿಂದ ರಾಜ್ಯದ ಕೊಡಗು ಜಿಲ್ಲೆಯ ಗೋಣಿಕೊಪ್ಪದ ಹೊಂಬಾಳಯ್ಯ, ತ್ರಿವೇಣಿ ದಂಪತಿ ಪುತ್ರಿ ಯಶಸ್ಮಿತ ಹಾಗೂ ತಮಿಳುನಾಡಿನ ಮೆಟ್ಟುಪಾಳ್ಯಂ ನಿವಾಸಿ ಶಕ್ತಿವೇಲು-ಲತಾ ದಂಪತಿ ಪುತ್ರ ಸತೀಶ್ ಕುಮಾರ್ ಗಡಿ ದಾಟದೆ, ಪುಣಜನೂರು ಚೆಕ್​ಪೋಸ್ಟ್​​ನ ಗಣೇಶ ಗುಡಿಯಲ್ಲೇ ವಿವಾಹವಾಗಿದ್ದಾರೆ. ವಿವಾಹವಾದ ಬಳಿಕ ವಧು-ವರರು ತಮ್ಮ-ತಮ್ಮ ಊರಿಗೆ ಮರಳಿದ್ದಾರೆ‌. ಈ ಮದುವೆಗೆ ಚೆಕ್​ಪೋಸ್ಟ್​​ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಾಕ್ಷಿಯಾದರು.

-ಗುಳಿಪುರ ನಂದೀಶ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com