ಯಾದಗಿರಿ: ಜಿಲ್ಲೆಯ ಧೂರನಹಳ್ಳಿ ಗ್ರಾಮದಲ್ಲಿ ಬಾವಿಗೆ ಜಿಗಿದು ಒಂದೇ ಕುಟುಂಬದ ಆರು ಮಂದಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟಣೆ ಸೋಮವಾರ ನಡೆದಿದೆ.
ನತದೃಷ್ಟರನ್ನು ಭೀಮರಾಯ ಸುರಪುರ(45), ಅವರ ಪತ್ನಿ ಶಾಂತಮಮ್ಮ(38), ಮಕ್ಕಳಾದ ಸುಮಿತ್ರಾ, ಲಕ್ಷ್ಮಿ, ಶ್ರೀದೇವಿ ಮತ್ತು ಶಿವರಾಜ್ ಎಂದು ಗುರುತಿಸಲಾಗಿದೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಹೊಲದಲ್ಲಿ ಕೊಳವೆ ಬಾವಿ ಅಗೆಯಲು ಭೀಮರಾಯ ಅಪಾರ ಸಾಲ ಮಾಡಿದ್ದರು ಎನ್ನಲಾಗಿದೆ. ಘಟನೆ ಸುದ್ದಿ ತಿಳಿದು ಗ್ರಾಮಸ್ಥರು ಮತ್ತು ನತದೃಷ್ಟರ ಸಂಬಂಧಿಕರು ದಿಗ್ಭ್ರಾಂತರಾಗಿದ್ದಾರೆ.
ಎಲ್ಲ ಆರು ಮಂದಿಯ ಮೃತದೇಹಗಳನ್ನು ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ಬಾವಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement