ಮಡಿಕೇರಿ: ಮಡಿಕೇರಿ ಕೋವಿಡ್ ಆಸ್ಪತ್ರೆಯಿಂದ ಮೊಬೈಲ್ ಫೋನ್ ಕಳ್ಳತನ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಕೆಡಿ ಸುಮಂತ್ (24) ಬಂಧಿತ ಆರೋಪಿಯಾಗಿದ್ದಾನೆ.
ಕೋವಿಡ್-19 ಸೋಂಕಿನಿಂದ ಮೃತರಾದ ಉಷಾ ಕಿರಣ್ ಅವರ ಮೊಬೈಲ್ ಫೋನ್ ನ್ನು ಕೋವಿಡ್ ಆಸ್ಪತ್ರೆಯಿಂದ ನಮಗೆ ವಾಪಸ್ ನೀಡಿಲ್ಲ ಎಂದು ಅವರ ಕುಟುಂಬಸ್ಥರು ಮಡಿಕೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ಆರಂಭಿಸಿದ ಪೊಲೀಸರು, ಆಸ್ಪತ್ರೆಗೆ ಪಾನೀಯಗಳನ್ನು ಸರಬರಾಜು ಮಾಡುತ್ತಿದ್ದ ಆರೋಪಿ ಸುಮಂತ್ ನನ್ನು ಬಂಧಿಸಿದ್ದಾರೆ. ಕಳ್ಳತನ ಪ್ರಕರಣದಲ್ಲಿ ಆರೋಪಿಯ ಇತಿಹಾಸವಿರುವುದನ್ನು ಪೊಲೀಸ್ ಮೂಲಗಳು ಸ್ಪಷ್ಟಪಡಿಸಿವೆ.
ಕೋವಿಡ್-19 ಸೋಂಕಿನಿಂದ ಮೃತಪಟ್ಟ ಉಷಾ ಕಿರಣ್, ಎಸ್ ಬಿ ಸೊಮಯ್ಯ ಮತ್ತು ಇನ್ನೊಬ್ಬರ ಮೊಬೈಲ್ ಫೋನ್ ನೊಂದಿಗೆ ವಿವಿಧ ಬ್ಯಾಂಕಿನ ಮೂರು ಟಿಎಎಂ ಕಾರ್ಡ್ ಗಳನ್ನು ಮರು ಪಡೆಯಲಾಗಿದೆ. ಎಸ್ ಪಿ ಕ್ಷಮಾ ಮಿಶ್ರಾ ಮಾರ್ಗದರ್ಶನದಲ್ಲಿ ಮಡಿಕೇರಿ ಇನ್ಸ್ ಪೆಕ್ಟರ್ ಅನೂಫ್ ಮಾದಪ್ಪ ನೇತೃತ್ವದಲ್ಲಿನ ತಂಡ ಈ ಪ್ರಕರಣದ ತನಿಖೆ ನಡೆಸುತ್ತಿತ್ತು.
ಪ್ರಭಾ ಅವರ ಮೊಬೈಲ್ ಫೋನ್ ನ್ನು ಪೊಲೀಸರು ಇನ್ನೂ ಹುಡುಕುತ್ತಿದ್ದಾರೆ. ಅವರ 9 ವರ್ಷದ ಪುತ್ರಿ ಹೃಷಿಕಾ ಫೋನ್ ಗಾಗಿ ಮಾಡಿದ್ದ ಮನವಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
Advertisement