ಉತ್ತರ ಕನ್ನಡ: 'ರುಚಿಯಾದ ಸಾಂಬಾರ್ ಮಾಡಿಲ್ಲ' ಎಂದು ತಾಯಿ-ಸಹೋದರಿಯನ್ನು ಗುಂಡಿಟ್ಟು ಕೊಂದ ಯುವಕ

ಜಿಲ್ಲೆಯ ಕೊಡಗೋಡು ಎಂಬಲ್ಲಿ ರುಚಿಯಾದ ಸಾಂಬಾರ್ ಮಾಡದಿದ್ದಕ್ಕೆ ಯುವಕನೋರ್ವ ತನ್ನ ತಾಯಿ ಮತ್ತು ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಉತ್ತರ ಕನ್ನಡ: ಜಿಲ್ಲೆಯ ಕೊಡಗೋಡು ಎಂಬಲ್ಲಿ ರುಚಿಯಾದ ಸಾಂಬಾರ್ ಮಾಡದಿದ್ದಕ್ಕೆ ಯುವಕನೋರ್ವ ತನ್ನ ತಾಯಿ ಮತ್ತು ಸಹೋದರಿಯನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. 

ಆರೋಪಿಯನ್ನು 24 ವರ್ಷದ ಮಂಜುನಾಥ ಹಸ್ಲರ್ ಎಂದು ಗುರುತಿಸಲಾಗಿದೆ. ಮೃತರನ್ನು ಮಂಜುನಾಥ್ ತಾಯಿ 42 ವರ್ಷದ ಪಾರ್ವತಿ ನಾರಾಯಣ ಹಸ್ಲರ್ ಮತ್ತು 19 ವರ್ಷದ ರಮ್ಯಾ ನಾರಾಯಣ ಹಸ್ಲರ್ ಎಂದು ಗುರುತಿಸಲಾಗಿದೆ.

ಆರೋಪಿ ಮಂಜುನಾಥ್ ಮದ್ಯವ್ಯಸನಿ ಎಂದು ತಿಳಿದು ಬಂದಿದೆ. ರುಚಿಯಾದ ಸಾಂಬರ್ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಾಯಿಯೊಂದಿಗೆ ಜಗಳವಾಡಿದ್ದನು. ಅಲ್ಲದೆ ಸಾಲ ಪಡೆದು ತನ್ನ ತಂಗಿಗೆ ಸೆಲ್‌ಫೋನ್ ಖರೀದಿಸುವ ತಾಯಿಯ ಯೋಜನೆಯನ್ನು ಅವನು ವಿರೋಧಿಸಿದನು ಎಂದು ತಿಳಿದುಬಂದಿದೆ.

ಮೊಬೈಲ್ ಕೊಡಿಸಬೇಡ ಎಂದು ಹೇಳಲು ನೀನು ಯಾರು ಎಂದು ಪಾರ್ವತಿ ಮಗ ಮಂಜುನಾಥ್ ನನ್ನು ಪ್ರಶ್ನಿಸಿದ್ದಾರೆ. ಇದರಿಂದ ಕುಪಿತಗೊಂಡ ಮಂಜುನಾಥ್ ಮನೆಯಲ್ಲಿ ಮಲಗಿದ್ದ ತಾಯಿಯ ಮೇಲೆ ದೇಶೀಯ ಬಂದೂಕಿನಿಂದ ಗುಂಡು ಹಾರಿಸಿದ್ದಾನೆ. ನಂತರ, ಆತ ತನ್ನ ಸಹೋದರಿಯ ಮೇಲೆ ಗುಂಡು ಹಾರಿಸಿದನು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ತಂದೆ ಮನೆಗೆ ಮರಳಿದ ನಂತರ ಆತನ ಮಗನ ವಿರುದ್ಧ ಪೊಲೀಸರಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com