ಬೆಂಗಳೂರು: ಮೈಸೂರು ಜಿಲ್ಲೆಯಲ್ಲಿ ಸಾಮೂಹಿಕ ಅತ್ಯಾಚಾರದ ಕಹಿ ಘಟನೆ ಮಾಸುವ ಮುನ್ನವೇ ಬೆಂಗಳೂರು ಹೊರವಲಯದಲ್ಲಿ ಏಕಾಂತಕ್ಕೆ ಹೋದವರ ಮೇಲೆ ದೌರ್ಜನ್ಯ ಮಾಡಿ ಬೆದರಿಕೆ ಹಾಕಲಾಗಿತ್ತು.
ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂದೇನಹಳ್ಳಿ ಗ್ರಾಮದಸಯ್ಯದ್ ಆಸಿಫ್ ಫಾಷಾ , ನವಾಜ್ ಪಾಷ, ಲಿಯಾಖತ್ ಪಾಷಾ, ಸಲ್ಮಾನ್ ಖಾನ್, ರೂಹಿದ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಇದೇ ತಿಂಗಳ 25 ರಂದು ಬೆಳಗ್ಗೆ 11 ಗಂಟೆಗೆ ಯುವತಿ ತನ್ನ ಸಂಬಂಧಿಯೊಂದಿಗೆ ಅನುಗೊಂಡನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಹಂದೇನಹಳ್ಳಿ ಗ್ರಾಮದ ಖಾಸಗಿ ಲೇಔಟ್ಗೆ ತೆರಳಿದ್ದರು.
ಬಳಿಕ ಕಾರಿನಲ್ಲಿ ಕೂತು ಸ್ನ್ಯಾಕ್ಸ್ ಮತ್ತು ತಂಪು ಪಾನೀಯ ಸೇವಿಸಿದ್ದರು. ಆಗ ಬೆಳಿಗ್ಗೆ 11.30ರ ಹೊತ್ತಿಗೆ ಕೀಚಕರ ಗುಂಪೊಂದು ಅಲ್ಲಿಗೆ ಬಂದಿದ್ದು, ಯುವತಿ-ಯುವಕನನ್ನು ವಿಡಿಯೋ ಮಾಡಿ ಬೆದರಿಸಿದ್ದಾರೆ.
Advertisement