ಅಫ್ಘಾನ್ ಬೆಳವಣಿಗೆ: ಬಳ್ಳಾರಿಯಲ್ಲಿನ ಅಂಜೂರ ರೈತರು ಕಂಗಾಲು!

ಅಫ್ಘಾನಿಸ್ತಾನದ ದುರಂತ ಬೆಳವಣಿಗೆಗಳು ದೂರದ ಬಳ್ಳಾರಿಯಲ್ಲಿ ಆರ್ಥಿಕ ಪರಿಣಾಮಗಳನ್ನು ಬೀರಿದೆ. ಅಂಜೂರದ ಹಣ್ಣುಗಳನ್ನು ಬೆಳೆಯುವ ರೈತರು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಕಾರಣ ಅಫ್ಗಾನ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನಿಗಳು ಅಂಜುರ್ ಸೇರಿದಂತೆ ಎಲ್ಲಾ ಆಮದುಗಳನ್ನು ನಿಷೇಧಿಸಿದ್ದಾರೆ.
ಅಂಜೂರ ಬೆಳೆಯುವ ರೈತರು
ಅಂಜೂರ ಬೆಳೆಯುವ ರೈತರು

ಬಳ್ಳಾರಿ: ಅಫ್ಘಾನಿಸ್ತಾನದ ದುರಂತ ಬೆಳವಣಿಗೆಗಳು ದೂರದ ಬಳ್ಳಾರಿಯಲ್ಲಿ ಆರ್ಥಿಕ ಪರಿಣಾಮಗಳನ್ನು ಬೀರಿದೆ. ಅಂಜೂರದ ಹಣ್ಣುಗಳನ್ನು ಬೆಳೆಯುವ ರೈತರು ಅನಿಶ್ಚಿತ ಭವಿಷ್ಯವನ್ನು ಎದುರಿಸುತ್ತಿದ್ದಾರೆ. ಕಾರಣ ಅಫ್ಗಾನ್ ಮೇಲೆ ಹಿಡಿತ ಸಾಧಿಸಿದ ತಾಲಿಬಾನಿಗಳು ಅಂಜುರ್ ಸೇರಿದಂತೆ ಎಲ್ಲಾ ಆಮದುಗಳನ್ನು ನಿಷೇಧಿಸಿದ್ದಾರೆ.

ಹಲವು ವರ್ಷಗಳಿಂದ ಅಫ್ಘಾನಿಸ್ತಾನ ಮತ್ತು ಇರಾನ್‌ಗೆ ಬಳ್ಳಾರಿ ಪ್ರಮುಖ ಪೂರೈಕೆದಾರವಾಗಿತ್ತು. ಅಲ್ಲದೆ ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಅಂಜೂರು ಹಣ್ಣನ್ನು ಬೆಳೆಯುವುದು ಹೆಚ್ಚಾಗಿದೆ. ಇದೀಗ ಜಿಲ್ಲೆಯ ಕುರುಗೋಡು ತಾಲೂಕಿನಲ್ಲಿ 30,000 ಹೆಕ್ಟೇರ್‌ಗಳಿ ಅಂಜೂರ ಬೆಳೆಯಲಾಗುತ್ತಿದೆ. 

ಇಲ್ಲಿನ ರೈತರು ತೇವ ಮತ್ತು ಒಣ ಅಂಜೂರವನ್ನು ಪಶ್ಚಿಮ ಏಷ್ಯಾದ ದೇಶಗಳಿಗೆ ರಫ್ತು ಮಾಡುತ್ತಾರೆ. ಅಫ್ಘಾನಿಸ್ತಾನ ಮತ್ತು ಇರಾನ್ ಪ್ರಮುಖ ಆಮದುದಾರರಾಗಿದ್ದಾರೆ. ಅಂಜೂರು ಬೆಳೆಗಾರ ಶ್ರೀನಿವಾಸ್ ರೆಡ್ಡಿ ಮಾತನಾಡಿ, ಕುರುಗೋಡು ತಾಲ್ಲೂಕು ವೈವಿಧ್ಯಮಯ ಹಣ್ಣುಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಹೆಚ್ಚಿನ ರೈತರು ತೇವ ಅಂಜೂರವನ್ನು ಬೆಳೆಯುತ್ತಾರೆ. ಕೆಲವರು ಡಯಾನಾ ತಳಿಯನ್ನು ಬೆಳೆಯುತ್ತಾರೆ. ಇದನ್ನು ಜನಪ್ರಿಯವಾಗಿ ಒಣ ಅಂಜೂರ ಅಥವಾ ಒಣ ಅಂಜೀರ್ ಎಂದು ಕರೆಯಲಾಗುತ್ತದೆ. 

ಬೆಳೆಗಾರರು ಉತ್ತಮ ಫಸಲನ್ನು ಪಡೆಯುವುದರಿಂದ ಹಣ್ಣುಗಳನ್ನು ರಫ್ತು ಮಾಡಲು ಬಯಸುತ್ತಾರೆ. ಭಾರತದಲ್ಲಿ ಪ್ರತಿ ಕೆಜಿಗೆ 600-700 ರೂ.ಗೆ ಮಾರಾಟವಾಗುವ ಆರ್ದ್ರ ಅಂಜೂರಕ್ಕೆ ವಿದೇಶದಲ್ಲಿ 1,000 ರೂ.ಗಿಂತ ಹೆಚ್ಚು ಬೆಲೆ ಇದೆ ಎಂದು ಅವರು ಹೇಳಿದರು. ರಫ್ತು ಕುಸಿತದಿಂದಾಗಿ, ರೈತರು ಈಗ ದೇಶೀಯ ಮಾರುಕಟ್ಟೆಯಲ್ಲಿ ಅವಕಾಶಗಳನ್ನು ಅನ್ವೇಷಿಸಬೇಕಾಗುತ್ತದೆ ಎಂದು ಹೇಳಿದರು.

ಮತ್ತೊಬ್ಬ ಅಂಜೂರು ಕೃಷಿಕ ಹರಿಶೇಖರ್ ಜಿ ಅವರು ಕಳೆದ ಎರಡು ತಿಂಗಳಿನಿಂದ ಅಂತಾರಾಷ್ಟ್ರೀಯ ಮಾರುಕಟ್ಟೆ ಕುಸಿದಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಏಕೆಂದರೆ ನಾವು ಒದ್ದೆಯಾದ ಅಂಜೂರವನ್ನು ದೀರ್ಘಕಾಲ ಸಂಗ್ರಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com