ಮಲೆನಾಡಿನಲ್ಲಿ ಮುಂದುವರೆದ ಮಳೆಯ ಆರ್ಭಟ: ಅಪಾಯ ಮಟ್ಟ ಮೀರಿ ಉಕ್ಕಿ ಹರಿಯುತ್ತಿರುವ ನದಿಗಳು

ರಾಜ್ಯದ ಹಲವೆಡೆ ಮಳೆರಾಯನ ಅಬ್ಬರ ಮುಂದುವರಿದಿದೆ. ಶನಿವಾರ ರಾತ್ರಿಯಿಂದ ಭಾನುವಾರದವರೆಗೆ ಕೊಪ್ಪ, ಮೂಡಿಗರೆ, ಶೃಂಗೇರಿ ಮತ್ತು ಎನ್.ಆರ್.ಪುರ ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗಿದೆ.
ಮಳೆಯಿಂದಾಗಿ ಧರೆಗುರುಳಿದ ಮರ
ಮಳೆಯಿಂದಾಗಿ ಧರೆಗುರುಳಿದ ಮರ

ಚಿಕ್ಕಮಗಳೂರು: ರಾಜ್ಯದ ಹಲವೆಡೆ ಮಳೆರಾಯನ ಅಬ್ಬರ ಮುಂದುವರಿದಿದೆ. ಶನಿವಾರ ರಾತ್ರಿಯಿಂದ ಭಾನುವಾರದವರೆಗೆ ಕೊಪ್ಪ, ಮೂಡಿಗರೆ, ಶೃಂಗೇರಿ ಮತ್ತು ಎನ್.ಆರ್.ಪುರ ತಾಲ್ಲೂಕುಗಳಲ್ಲಿ ಭಾರೀ ಮಳೆಯಾಗಿದೆ.

ಸೋಮವಾರ ಬೆಳಗ್ಗೆ ಕೊಂಚ ಬಿಡುವು ನೀಡಿದ್ದ ಮಳೆ ಮಧ್ಯಾಹ್ನವಾಗುತ್ತಿದ್ದಂತೆ ಮತ್ತೆ ಜೋರಾಗಿ ಸುರಿಯಲು ಆರಂಭಿಸಿತು. ಮೂಡಿಗೆರೆ ತಾಲೂಕಿನಲ್ಲಿ ಕಲಸ, ಹೊರನಾಡು, ಕುದುರೆಮುಖ, ಜವಳಿ, ಹೀರೆಬೈಲ್, ಬಾಲೂರು, ಶೃಂಗೇರಿ ತಾಲ್ಲೂಕಿನಲ ಶೃಂಗೇರಿ, ಕಿಗ್ಗ, ಅಗಲಗಂಡಿ, ಕೆರೆಕಟ್ಟೆ, ನೆಮ್ಮಾರ್, ಉತ್ತಮೇಶ್ವರ ಹಾಗೂ ಎನ್.ಆರ್.ಪುರ ತಾಲ್ಲೂಕಿನ ಬೀಜದಕಟ್ಟೆ, ಜಯಪುರ, ಬಾಲೆಹೊನ್ನೂರುಗಳಲ್ಲಿ  ಶನಿವಾರ ರಾತ್ರಿಯಿಂದ ಭಾರೀ ಮಳೆಯಾಗಿದೆ.

ಕುದುರೆಮುಖ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ, ಈ ಪ್ರದೇಶದಲ್ಲಿ ಹುಟ್ಟಿದ ತುಂಗಾ, ಭದ್ರಾ ಮತ್ತು ಹೇಮ್ವತಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಭದ್ರಾ ನದಿಯ ಹರಿವಿನಿಂದಾಗಿ ಬಾಳೇಹೊನ್ನೂರು ಸೇತುವೆ ಮುಳುಗಿದ ಕಾರಣ ಕಳಸ ಮತ್ತು ಹೊರನಾಡು ನಡುವಿನ ಸಂಚಾರ ಸ್ಥಗಿತಗೊಂಡಿದೆ.

ಬನಕಲ್ ಬಳಿಯ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ಎರಡೂ ಬದಿಗಳ ಹೊಲಗಳು ಜಲಾವೃತವಾಗಿವೆ. ಮಲೆನಾಡು ಭಾಗದ ರೈತರು ಭತ್ತದ ಸಸಿಗಳನ್ನು ಕಸಿ ಮಾಡಲು ಸಜ್ಜಾಗಿದ್ದಾರೆ. ನಿರಂತರ ಮಳೆಯಿಂದಾಗಿ ಕಾಫಿ ತೋಟಗಾರರು ಕೊಳೆ ರೋಗದ ಬಗ್ಗೆ ಚಿಂತಿತರಾಗಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಅನ್ ಲಾಕ್ ಮಾಡಿದ ನಂತರ, ಪ್ರವಾಸಿಗರು ಹಿಮದಿಂದ ಆವೃತವಾಗಿರುವ ಚಾರ್ಮಾಡಿ ಘಾಟ್ ನತ್ತ ತೆರಳುತ್ತಿದ್ದಾರೆ, ಯುವ ಪ್ರವಾಸಿಗರು ತಮ್ಮ ವಾಹನಗಳನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ  ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ, ಟ್ರಾಫಿಕ್ ಜಂಗುಳಿ ಉಂಟಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com