ಅಪ್ಪಂದಿರ ದಿನವೇ ಮಂಡ್ಯದಲ್ಲಿ ದುರಂತ: ಮಗಳ ಆತ್ಮಹತ್ಯೆಯಿಂದ ನೊಂದ ತಂದೆಗೆ ಹೃದಯಾಘಾತ

ವಿಶ್ವ ಅಪ್ಪಂದಿರ ದಿನವೇ ಮಂಡ್ಯದಲ್ಲಿ ಯಾರೂ  ಬಯಸದ ದುರಂತವೊಂದು ನಡೆದುಹೋಗಿದೆ. ಒಳ್ಳೆಯ ಕಾಲೇಜಿಗೆ ಸೇರಿಸಿಲ್ಲ ಎಂದು ಬೇಸರಗೊಂಡ ಮಗಳು ನೇಣಿಗೆ ಶರಣಾಗಿದ್ದನ್ನು ನೋಡಿದ ತಂದೆ ಮನನೊಂದಿದ್ದು ಅವರಿಗೂ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.
ಬಾಂಧವ್ಯ ಹಾಗೂ ಆಕೆಯ ತಂದೆ ರಾಜಣ್ಣ
ಬಾಂಧವ್ಯ ಹಾಗೂ ಆಕೆಯ ತಂದೆ ರಾಜಣ್ಣ

ಮಂಡ್ಯ: ವಿಶ್ವ ಅಪ್ಪಂದಿರ ದಿನವೇ ಮಂಡ್ಯದಲ್ಲಿ ಯಾರೂ  ಬಯಸದ ದುರಂತವೊಂದು ನಡೆದುಹೋಗಿದೆ. ಒಳ್ಳೆಯ ಕಾಲೇಜಿಗೆ ಸೇರಿಸಿಲ್ಲ ಎಂದು ಬೇಸರಗೊಂಡ ಮಗಳು ನೇಣಿಗೆ ಶರಣಾಗಿದ್ದನ್ನು ನೋಡಿದ ತಂದೆ ಮನನೊಂದಿದ್ದು ಅವರಿಗೂ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾ,ಮದಲ್ಲಿ ಸಂಭವಿಸಿದ ಘಟನೆಯಲ್ಲಿ ಬಾಂಧವ್ಯ (17) ನೇಣಿಗೆ ಶರಣಾಗಿದ್ದರೆ ಆಕೆಯ ತಂದೆ ರಾಜಣ್ಣ  (65) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಬಾಂಧವ್ಯ ತಾನು ಕಾಲೇಜಿಗೆ ಸೇರುವ ವಿಚಾರದಲ್ಲಿ ತಂದೆ ಜತೆ ಜಗಳವಾಡಿದ್ದಾಳೆ. ಆ ನಂತರ ಭಾನುವಾರ ಬೆಳಗಿನ ಜಾವ ಮನೆಯಲ್ಲೇ ನೇಣಿಗೆ ಶರಣಾಗಿದ್ದಾಳೆ. ಈ ದೃಶ್ಯ ನೋಡಿದ ರಾಜಣ್ಣನವರಿಗೆ ಹೃದಯಾಘಾತವಾಗಿದೆ.

ಮಗಳ ಅಂತಿಮ ಸಂಸ್ಕಾರದ ವೇಳೆ ರಾಜಣ್ಣನವರಿಗೆ ಹೃದಯಾಘಾತವಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.

ಚಿಕ್ಕ ವಿಷಯಕ್ಕೆ ಒಂದೇ ದಿನ ಎರಡು ಜೀವ ಬಲಿಯಾಗಿದೆ. ಘಟನೆ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com