ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಕಾರ್ಮಿಕದ ದಿನದ ಶುಭಾಶಯ ಕೋರಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ದೇಶ ನಿರ್ಮಾಣದ ಕಾರ್ಯದಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತಿರುವ ನಮ್ಮ ಲಕ್ಷಾಂತರ ಶ್ರಮಿಕರ, ಕಾರ್ಮಿಕರ ಪರಿಶ್ರಮ ಮತ್ತು ಬದ್ಧತೆ ಅನುಪಮವಾದದ್ದು. ಈ ಕಾರ್ಮಿಕರ ದಿನದಂದು ಅವರೆಲ್ಲರ ಸಮರ್ಪಣಾಭಾವ ಹಾಗೂ ಸಾಧನೆಗಳಿಗೆ ಅಭಿನಂದನೆ ಸಲ್ಲಿಸೋಣ ಎಂದು ತಿಳಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿ, ಕಾರ್ಮಿಕ ಬಂಧುಗಳು ಎದುರಿಸುತ್ತಿರುವ ಕೊರೊನರೋಗದ ಸಂಕಷ್ಟದ ದಿನಗಳು ಶೀಘ್ರ ದೂರವಾಗಲಿ, ಸರ್ಕಾರ ಮತ್ತು ಸಮಾಜ ಕಾರ್ಮಿಕರ ಕಷ್ಟ-ನಷ್ಟಗಳಿಗೆಮಾನವೀಯವಾಗಿ ಸ್ಪಂದಿಸಲಿ. ವರ್ತಮಾನದದುರಿತವನ್ನು ಎದುರಿಸುವ ಚೈತನ್ಯ ಕಾರ್ಮಿಕ ಬಂಧುಗಳದ್ದಾಗಲಿ. ಕಾರ್ಮಿಕದಿನಾಚರಣೆಯ ಶುಭಾಶಯಗಳು ಎಂದು ಹಾರೈಸಿದ್ದಾರೆ.
Advertisement