ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ ಗ್ರಾಮದಲ್ಲಿ ನಿನ್ನೆಯಷ್ಟೇ ಮದುವೆಯಾಗಿ ವಧುವಿನ ಮನೆಗೆ ಬಂದಿದ್ದ ಮದುಮಗ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
28 ವರ್ಷದ ಶಶಿಕರುಮಾರ್ ಪಟ್ಟಣಶೆಟ್ಟಿ ನಾಲ್ಕು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಜ್ವರದ ನಡುವೆ ನಿನ್ನೆ ಮದುವೆ ಮಾಡಿಕೊಂಡಿದ್ದರು. ಇಂದು ಮಾವನ ಮನೆಗೆ ತೆರಳಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಶಶಿಕುಮಾರ್ ನಿಧನದಿಂದಾಗಿ ಎರಡೂ ಕುಟುಂಬಗಳಲ್ಲಿ ನೀರವ ಮೌನ ಆವರಿಸಿದೆ.
Advertisement