ಬೆಂಗಳೂರು: ಮಹಾನಗರದಲ್ಲಿಂದು ಸಿನಿಮೀಯ ರೀತಿಯಲ್ಲಿ ಹಾಡುಹಗಲೇ 5.5 ಕೆಜಿ ಚಿನ್ನ ದರೋಡೆ ಮಾಡಲಾಗಿದೆ.
ಇಂದು ಮಧ್ಯಾಹ್ನ ದರೋಡೆ ನಡೆದಿದೆ. ಬೈಕಿನಲ್ಲಿ ಚಿನ್ನವನ್ನು ತಮ್ಮ ಸಂಸ್ಕಾರ್ ಎಂಟರ್ ಪ್ರೈಸಸ್ ಅಂಗಡಿಗೆ ತೆಗೆದುಕೊಂಡು ಹೋಗುತ್ತಿದ್ದ ಸಿದ್ದೇಶ್ವರ ಹರಿಭಾ ಸಿಂಧೆ ಎಂಬುವರನ್ನು ದುಷ್ಕರ್ಮಿಗಳು ಅಡ್ಡಗಟ್ಟಿದ್ದಾರೆ. ಅವರ ಬಳಿ ಚಿನ್ನವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಇಬ್ಬರು ದರೋಡೆಕೋರರು ಈ ಕೃತ್ಯ ನಡೆಸಿದ್ದಾರೆ. ಚಿನ್ನದ ಮೌಲ್ಯ 2.5 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕಬ್ಬನ್ ಪೇಟೆ ಬಳಿ ದುರ್ಘಟನೆ ನಡೆದಿದೆ. ಪ್ರಕರಣದ ಸಂಬಂಧ ಚಿನ್ನದಂಗಡಿ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದಾರೆ. ಪರಾರಿಯಾಗಿರುವ ದರೋಡೆಕೋರರಿಗಾಗಿ ಹುಡುಕಾಟ ನಡೆಯುತ್ತಿದೆ.
Advertisement