ಬೆಂಗಳೂರು: ಚನ್ನಪಟ್ಟಣದ ಓವರ್ ಹೆಡ್ ನೀರಿನ ಟ್ಯಾಂಕ್ ನಲ್ಲಿ ಮಹಿಳೆಯೊಬ್ಬರ ಶವ ಪತ್ತೆಯಾದ ಹಿನ್ನೆಲೆಯಲ್ಲಿ ಒಟ್ಟಾರೆ ಪೈಪ್ ಲೈನ್ ಬದಲಾವಣೆ ಮಾಡಿ ಹೊಸ ಪೈಪ್ ಲೈನ್ ಅಳವಡಿಸುವಂತೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ಒಂದು ವಾರದಲ್ಲಿ ಹೊಸ ಪೈಪ್ ಲೈನ್ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು. ನಿನ್ನೆ ಪೈಪ್ ಲೈನ್ ನಲ್ಲಿ ಶವದ ಕುರುಹುಗಳು ಪತ್ತೆಯಾಗಿತ್ತು. ಕೂಡಲೇ ಸಿಂಧಗಿ ವಿಧಾನಸಭಾ ಕ್ಷೇತ್ರದ ಪ್ರಚಾರದಲ್ಲಿದ್ದ ಮಾಜಿ ಮುಖ್ಯಮಂತ್ರಿಯವರು ಅಲ್ಲಿಂದಲೇ ಅಧಿಕಾರಿಗಳ ಜತೆ ಮಾತನಾಡಿ, ಇಡೀ ಪೈಪ್ ಲೈನ್ ಅನ್ನು ಸಂಪೂರ್ಣವಾಗಿ ಪರಿಶೀಲಿಸುವಂತೆ ಅವರು ಸೂಚಿಸಿದ್ದರು.
ಈಗಾಗಲೇ ಮಾಜಿ ಮುಖ್ಯಮಂತ್ರಿಗಳ ಆದೇಶದಂತೆ ಟ್ಯಾಂಕ್ ನೀರು ಸರಬರಾಜಾಗುವ ವಾರ್ಡುಗಳಿಗೆ ಸದ್ಯ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.
'ಸಮ್ಮಿಶ್ರ ಸರ್ಕಾರ ಕೆಡವಲು ಅವರಿಗೂ ಇಷ್ಟವಿತ್ತು: ಜೆಡಿಎಸ್ ತೊರೆದು ಬಿಜೆಪಿ ಸೇರಲು ಜಮೀರ್ ಸಲಹೆ ನೀಡಿದರು'
ಬಿಜೆಪಿ-ಜೆಡಿಎಸ್ ಗೆ ನನ್ನನ್ನು ಕಂಡರೆ ಭಯ, ರಾಜಕೀಯವಾಗಿ ಮುಗಿಸಲು ನನ್ನ ವಿರುದ್ಧ ಪಿತೂರಿ: ಸಿದ್ದರಾಮಯ್ಯ
ಜೆಡಿಎಸ್ ಶಾಸಕ ಮಂಜುನಾಥ್ ಬಂಧನ: ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ
ಅಲ್ಪಸಂಖ್ಯಾತರ ಓಲೈಕೆ ಮೂಲಕ ಜಾತ್ಯತೀತ ಅಸ್ಮಿತೆ ಸದೃಢವಾಗಿಸಲು ಜೆಡಿಎಸ್ ತಂತ್ರ!
'ಎರಡು ಕ್ಷೇತ್ರಗಳಲ್ಲಿ ಗೆಲುವು ನಮ್ಮದೇ: ಮತ ಎಣಿಕೆ ಕೆಂದ್ರದಲ್ಲಿ ಕಾಂಗ್ರೆಸ್- ಜೆಡಿಎಸ್ ಬಹಳ ಹೊತ್ತು ಇರುವುದಿಲ್ಲ'
Advertisement