ಮಾಜಿ ಶಾಸಕ ಮಾನಪ್ಪ ವಜ್ಜಲ್ ಪುತ್ರನ ಪುಂಡಾಟ: ಉದ್ಯಮಿ ಮೇಲೆ ಹಲ್ಲೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ​ ಮಗ ಕಾರು ಪಾರ್ಕಿಂಗ್​ ವಿಚಾರಕ್ಕೆ ಪುಂಡಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಮಾನಪ್ಪ ವಜ್ಜಲ್
ಮಾನಪ್ಪ ವಜ್ಜಲ್

ಬೆಂಗಳೂರು: ಬಿಜೆಪಿ ಮಾಜಿ ಶಾಸಕ ಮಾನಪ್ಪ ವಜ್ಜಲ್ ​ ಮಗ ಕಾರು ಪಾರ್ಕಿಂಗ್​ ವಿಚಾರಕ್ಕೆ ಪುಂಡಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. 

ವಸಂತನಗರದ ಎಂಬಸಿ ಅಪಾರ್ಟ್​ಮೆಂಟ್​ ನಲ್ಲಿ ಈ ಘಟನೆ ನಡೆದಿದ್ದು, ಈ ವೇಳೆ ಉದ್ಯಮಿ ದೀಪಕ್​ ರೈ ಮಗ ವಿಕ್ರಮ್​ ರೈ ಮೇಲೆ ಹಲ್ಲೆ ನಡೆಸಿದ್ದಾನೆ. 

ಕಳೆದ ಭಾನುವಾರ ರಾತ್ರಿ ಅಪಾರ್ಟ್​ಮೆಂಟ್​ನಲ್ಲಿ ಕಾರು ಪಾರ್ಕಿಂಗ್​ ವಿಚಾರಕ್ಕೆ ವಿಕ್ರಮ್​ ರೈ ಮತ್ತು ಆಂಜನೇಯ ವಜ್ಜಲ್​ ನಡುವೆ ಹೊಡೆದಾಟ ನಡೆದಿದೆ. ಈ ಗಲಾಟೆಯಲ್ಲಿ ವಿಕ್ರಮ್​ ರೈ ಕಣ್ಣಿನ ಮೇಲ್ಭಾಗಕ್ಕೆ ಗಾಯವಾಗಿದೆ. 

ಈ ಪ್ರಕರಣ ಸಂಬಂಧ ಹೈ ಗ್ರೌಂಡ್ ಪೊಲೀಸ್​ ಠಾಣೆಯಲ್ಲಿ ಆಂಜನೇಯ ವಜ್ಜಲ್​ ಮತ್ತು ವನೀಶ್​ ವಜ್ಜಲ್​ ದೂರು ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಕ್ರಮ್​ ರೈ ಸಹ ಠಾಣೆಯಲ್ಲಿ ದೂರು ನೀಡಿದ್ದು, ಇದುವರೆಗೂ ಯಾವುದೇ ಎಫ್​ಐಆರ್​ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com