ಹೆಸರಿಗೆ ಶಿಕ್ಷಕ, ಮಾಡುತ್ತಿದ್ದ ಕೆಲಸ ದೇವಸ್ಥಾನಗಳಿಂದ ವಸ್ತುಗಳನ್ನು ಲೂಟಿ ಮಾಡುವುದು!: ಶಾಲೆಯಿಂದ ಅಮಾನತು

ಶಿಕ್ಷಕ ವೃತ್ತಿ ಒಂದು ಶ್ರೇಷ್ಠವಾದ ವೃತ್ತಿ ಎಂಬುದು ಪ್ರಚಲಿತದಲ್ಲಿರುವ ಮಾತು. ಸಮಾಜವು ಜೀವನದ ಸದ್ಗುಣಗಳನ್ನು ಉತ್ತೇಜಿಸಲು ಮತ್ತು ಈ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಶಿಕ್ಷಕರನ್ನು ಎದುರು ನೋಡುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಯಲ್ಲಾಪುರ (ಉತ್ತರ ಕನ್ನಡ) : ಶಿಕ್ಷಕ ವೃತ್ತಿ ಒಂದು ಶ್ರೇಷ್ಠವಾದ ವೃತ್ತಿ ಎಂಬುದು ಪ್ರಚಲಿತದಲ್ಲಿರುವ ಮಾತು. ಸಮಾಜವು ಜೀವನದ ಸದ್ಗುಣಗಳನ್ನು ಉತ್ತೇಜಿಸಲು ಮತ್ತು ಈ ದಿಕ್ಕಿನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಶಿಕ್ಷಕರನ್ನು ಎದುರು ನೋಡುತ್ತದೆ.

ಆದರೆ ಇಲ್ಲೊಬ್ಬ ‘ಶಿಕ್ಷಕ’ ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಗಳ 18 ದೇವಸ್ಥಾನಗಳನ್ನು ಲೂಟಿ ಮಾಡಿದ ಆರೋಪದ ಮೇಲೆ ಬಂಧಿತನಾಗಿದ್ದಾನೆ. ಪೂಜೆ ಹಾಗೂ ಇತರೆ ವಿಧಿವಿಧಾನಗಳಲ್ಲಿ ಬಳಸುತ್ತಿದ್ದ ಕಂಚು, ತಾಮ್ರ, ಬೆಳ್ಳಿಯಿಂದ ಮಾಡಿದ ಸುಮಾರು 19.20 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈತನಿಂದ 12 ಲಕ್ಷ ಮೌಲ್ಯದ ವಾಹನ ಹಾಗೂ 30 ಸಾವಿರ ಮೌಲ್ಯದ ದ್ವಿಚಕ್ರ ವಾಹನ, 2.29 ಲಕ್ಷ ನಗದು, 50 ಸಾವಿರ ಮೌಲ್ಯದ ದೇವರ ಅಲಂಕಾರಕ್ಕೆ ಬಳಸಿದ 9 ಗ್ರಾಂ ಚಿನ್ನಾಭರಣ ಹಾಗೂ 1.8 ಲಕ್ಷ ಮೌಲ್ಯದ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದೆ.

ಹಾವೇರಿ ಜಿಲ್ಲೆಯ ಲಿಂಗದೇವರಕೊಪ್ಪದವನಾದ ವಸಂತಕುಮಾರ ತಂಬಕಡ್ ಆರೋಪಿಯಾಗಿದ್ದು, ಬ್ಯಾಡಗಿ ತಾಲೂಕಿನ ಗಲಪೂಜಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುತ್ತಿದ್ದಾನೆ. ವಸಂತ್ ತನ್ನ ಸಹಚರ, ಹಮಾಲಿ ಕೆಲಸ ಮಾಡುವ ಸಲೀಂ (28) ಎಂಬಾತನ ಜೊತೆ ಸೇರಿ ಕಳ್ಳತನ ನಡೆಸಿದ್ದ ಎನ್ನಲಾಗಿದೆ.

ಕಳ್ಳತನ ಆರೋಪದ ಮೇಲೆ ಶಿಕ್ಷಕನ ಅಮಾನತು: ಮುಖ್ಯಶಿಕ್ಷಕ
ವಸಂತ್ ಕುಮಾರ್ ಮತ್ತು ಸಲೀಂ ಶಿರಸಿ ಗ್ರಾಮಾಂತರ, ಬನವಾಸಿ, ಯಲ್ಲಾಪುರ, ಅಂಕೋಲಾ, ಶಿವಮೊಗ್ಗದ ರಿಪ್ಪನಪೇಟೆ ಹೊಸನಗರ, ಹಂಸಭಾವಿ, ಹಿರೇಕೆರೂರು ಹಾಗೂ ಹಾವೇರಿ ಗ್ರಾಮಾಂತರ ತಾಲೂಕಿನ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡಿದ್ದಾರೆ. ಇಬ್ಬರು ಕಳೆದ ಮೂರು ವರ್ಷಗಳಿಂದ ಈ ದುಷ್ಕೃತ್ಯ ನಡೆಸುತ್ತಿದ್ದಾರೆ. ಇದುವರೆಗೆ ಇವರ ವಿರುದ್ಧ 18 ಪ್ರಕರಣಗಳು ಪತ್ತೆಯಾಗಿವೆ. ಹೆಚ್ಚಿನ ಪ್ರಕರಣಗಳು ಮತ್ತು ಹೆಚ್ಚಿನ ಜನರು ಇದರಲ್ಲಿ ಭಾಗಿಯಾಗಿರುವ ಶಂಕೆಯಿದೆ ಎಂದು ಉತ್ತರ ಕನ್ನಡ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಹೇಳಿದ್ದಾರೆ. 

ದೇವಸ್ಥಾನಗಳಲ್ಲಿ ನಡೆಯುತ್ತಿರುವ ಸರಣಿ ಕಳ್ಳತನ ಉತ್ತರ ಕನ್ನಡ ಪೊಲೀಸರನ್ನು ಕಂಗೆಡಿಸಿತ್ತು. ಪ್ರಕರಣಗಳ ತನಿಖೆಗೆ ಎಸ್ಪಿ ವಿಷ್ಣುವರ್ಧನ್ ತಂಡ ರಚಿಸಿದ್ದರು. ಇಬ್ಬರು ಆರೋಪಿಗಳ ಮೇಲೆ ಪೊಲೀಸರು ಬಲೆ ಬೀಸಿದ್ದಾರೆ. ಶಿರಸಿ ಗ್ರಾಮಾಂತರ ಪ್ರದೇಶ ಹಾಗೂ ರಾಂಪುರದಲ್ಲಿ ಕೆಲಸ ಮಾಡುತ್ತಿದ್ದ ವಸಂತ್ ವಿದ್ಯಾರ್ಥಿಗಳಿಗೆ ಕನ್ನಡ ಮತ್ತಿತರ ವಿಷಯಗಳನ್ನು ಬೋಧಿಸುತ್ತಿದ್ದು, ಬ್ಯಾಡಗಿ ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದ. ಆತನ ತವರು ಜಿಲ್ಲೆಗೆ ವರ್ಗಾವಣೆಗೊಂಡಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳಾ ಸಹೋದ್ಯೋಗಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಕ್ಕಾಗಿ ಅಮಾನತುಗೊಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದರೂ, ಕಳ್ಳತನದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಕೆಲವೇ ದಿನಗಳ ಹಿಂದೆ ಆತನನ್ನು ಅಮಾನತುಗೊಳಿಸಲಾಗಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com