ಜೆಡಿಎಸ್ ಪಂಚರತ್ನ ರಥಯಾತ್ರೆ: ಕೆ.ಆರ್.ಪೇಟೆಯಲ್ಲಿ ಸ್ಟೀಲ್​ ಬಿಂದಿಗೆಗಾಗಿ ಮುಗಿಬಿದ್ದ ಮಹಿಳೆಯರು!

ಜೆಡಿಎಸ್ ಪಂಚರತ್ನ ರಥಯಾತ್ರೆ ವೇಳೆ ಸ್ಟೀಲ್ ಬಿಂದಿಗಾಗಿ ಮಹಿಳೆಯರು ಮುಗಿಬಿದ್ದ ಘಟನೆ ಕೆ.ಆರ್. ಪೇಟೆಯಲ್ಲಿ ಕಂಡು ಬಂದಿತು.
ಬಿಂದಿಗೆಗಳ ಎಸೆಯುತ್ತಿರುವ ಜೆಡಿಎಸ್ ಮುಖಂಡರು.
ಬಿಂದಿಗೆಗಳ ಎಸೆಯುತ್ತಿರುವ ಜೆಡಿಎಸ್ ಮುಖಂಡರು.

ಮಂಡ್ಯ: ಜೆಡಿಎಸ್ ಪಂಚರತ್ನ ರಥಯಾತ್ರೆ ವೇಳೆ ಸ್ಟೀಲ್ ಬಿಂದಿಗಾಗಿ ಮಹಿಳೆಯರು ಮುಗಿಬಿದ್ದ ಘಟನೆ ಕೆ.ಆರ್. ಪೇಟೆಯಲ್ಲಿ ಕಂಡು ಬಂದಿತು.

ಟ್ರ್ಯಾಕ್ಟರ್​ನಲ್ಲಿ ಹೊಸ ಸ್ಟೀಲ್ ಬಿಂದಿಗೆಗಳನ್ನು ತುಂಬಿಕೊಂಡು ಬಂದ ಜೆಡಿಎಸ್​ ಮುಖಂಡರು, ಮಹಿಳೆಯರಿಗೆ ಹಂಚಲು ಮುಂದಾಗಿದ್ದಾರೆ. ಈ ವೇಳೆ ನಾ ಮುಂದು, ತಾ ಮುಂದು ಎಂಬಂತೆ ಮಹಿಳೆಯರು ಮುಗಿಬಿದ್ದಿರುವುದು ಕಂಡು ಬಂದಿದೆ.

ಹೆಚ್ಚೆಚ್ಚು ಜನರು ಆಗಮಿಸಿದ ಹಿನ್ನೆಲೆಯಲ್ಲಿ ಒಂದೊಂದೇ ವಿತರಿಸಲು ಸಾಧ್ಯವಾಗದೇ ಮಹಿಳೆಯರತ್ತ ಬಿಂದಿಗೆಗಳನ್ನು ಎಸೆಯುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ವಿಡಿಯೋ ನೋಡಿ ಜೆಡಿಎಸ್ ನಾಯಕರು ಮತ್ತು ಮುಖಂಡರ ವಿರುದ್ಧ ಅನೇಕ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com