ಬೆಂಗಳೂರು: ವಿಮಾನ ಅಪಘಾತ ಕುರಿತು ವಾಸ್ತವಾಂಶ ಮುಚ್ಚಿಡುವ ಯತ್ನ!

ತರಬೇತಿ ನಿರತ ಲಘು ವಿಮಾನ ವಿಟಿಯುಎಂಜೆ ಜುಲೈ 16 ರಂದು ಬೆಳಗ್ಗೆ ಸುಮಾರು 8-30ರ ವೇಳೆಯಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾದ ಘಟನೆ ಸುತ್ತ ಮನೆಮಾಡಿದ ರಹಸ್ಯ ಬಯಲಾಗಿದೆ. 
ಜಕ್ಕೂರ್ ಏರೋ ಡ್ರಮ್ ಸಾಂದರ್ಭಿಕ ಚಿತ್ರ
ಜಕ್ಕೂರ್ ಏರೋ ಡ್ರಮ್ ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ತರಬೇತಿ ನಿರತ ಲಘು ವಿಮಾನ ವಿಟಿಯುಎಂಜೆ ಜುಲೈ 16 ರಂದು ಬೆಳಗ್ಗೆ ಸುಮಾರು 8-30ರ ವೇಳೆಯಲ್ಲಿ ಲ್ಯಾಂಡಿಂಗ್ ವೇಳೆ ಅಪಘಾತಕ್ಕೀಡಾದ ಘಟನೆ ಸುತ್ತ ಮನೆಮಾಡಿದ್ದ ನಿಗೂಢತೆ ಬಯಲಾಗಿದೆ. ವಿಮಾನದ ಫೈಲಟ್ ಹೆಸರು ಕ್ಯಾಪ್ಟನ್ ಅಮರನಾಥ್, ಸರ್ಕಾರಿ ವಿಮಾನ ಹಾರಾಟ ತರಬೇತಿ ಶಾಲೆಯ ಸುರಕ್ಷತಾ ಮ್ಯಾನೇಜರ್ ಮತ್ತು ಏರ್ ಟ್ರಾಫಿಕ್ ಕಂಟ್ರೋಲ್ ಉಸ್ತುವಾರಿಯಾಗಿದ್ದು, ಪ್ರಯಾಣಿಕರೊಬ್ಬರೊಂದಿಗೆ ವಿಮಾನ ಚಲಾಯಿಸುತ್ತಿದ್ದರು ಎಂದು ಮೂಲಗಳು ಹೇಳಿವೆ.

ವಿಟಿಯುಎಂಜೆ ಎಂಬ ವಿಮಾನ ಕುಮಾರಸ್ವಾಮಿ ಅವರದ್ದು ಎಂಬುದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ತನಿಖೆಯಿಂದ ತಿಳಿದುಬಂದಿದೆ. ವಿಮಾನ ಅಪಘಾತಕ್ಕೀಡಾದ ಸ್ಥಳದಲ್ಲಿ  ಆಕ್ಸಲ್ ಮುರಿದಿರುವುದನ್ನು ನೋಡಬಹುದು. ವಿಮಾನ ಟೇಕಾಫ್ ಆದ ಕೆಲವೇ ಸೆಂಕೆಂಡ್ ಗಳ ನಂತರ ಅಪಘಾತಕ್ಕೀಡಾಗುವಾಗ ಬೆಳಗ್ಗೆ 8-35ರ ಸುಮಾರಿನಲ್ಲಿ ವಿಮಾನದ ಬಲ ಚಕ್ರ ಕತ್ತರಿಸಲ್ಪಟ್ಟ ನಂತರ ಆಕ್ಸಲ್ ಮುರಿದಿರುವ ಗುರುತುಗಳು ಗೋಚರಿಸುತ್ತವೆ. ಒಂದು ಲಘು ವಿಮಾನ ಸುಮಾರು 60 ಲೀಟರ್ ಇಂಧನವನ್ನು ಒಯ್ಯುತ್ತದೆ, ಇದರ ಪ್ರಭಾವ ಅತ್ಯಂತ ಅಪಾಯಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಕ್ಯಾಪ್ಟನ್ ಅಮರನಾಥ್ ಸರ್ಕಾರಿ ಉದ್ಯೋಗಿಯಾಗಿದ್ದರೂ ಖಾಸಗಿ ವಿಮಾನವನ್ನು ಹೇಗೆ ಓಡಿಸುತ್ತಿದ್ದರು ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಎರಡನೆಯದಾಗಿ, 24 ಗಂಟೆಗಳ ಒಳಗೆ ಕಾನೂನಿನ ಮೂಲಕ ಕಡ್ಡಾಯವಾಗಿ ಅಪಘಾತದ ಬಗ್ಗೆ ಏಕೆ ವರದಿ ಮಾಡಲಾಗಿಲ್ಲ? ಮೂರನೆಯದಾಗಿ, ವಿಮಾನವನ್ನು ತರಾತುರಿಯಲ್ಲಿ ಏಕೆ  ಜಕ್ಕೂರು ಏರೋಡ್ರೋಮ್‌ನಿಂದ ತೆಗೆಯಲಾಯಿತು, ಇದಕ್ಕೆ ಯಾರು ಅನುಮತಿ ನೀಡಿದರು? ವಿಮಾನವನ್ನು ಪರಿಶೀಲಿಸಿದ ಅವರು ಘಟನೆಯನ್ನು ಏಕೆ ವರದಿ ಮಾಡಲಿಲ್ಲ?

ಅಪಘಾತ ಘಟನೆಯನ್ನು ನೋಡಿದ್ದಾಗಿ ಇಬ್ಬರು ಪ್ರತ್ಯಕ್ಷದರ್ಶಿಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ. ವಿಮಾನದ ಮಾಲೀಕ ಕುಮಾರಸ್ವಾಮಿ ಅವರು ಅಪಘಾತದ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿಲ್ಲ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಅವರನ್ನು ಸಂಪರ್ಕಿಸಿದಾಗ, ಯಾವುದೇ ಅಪಘಾತ ಸಂಭವಿಸಿಲ್ಲ ಮತ್ತು ವಿಮಾನವು ಜಕ್ಕೂರಿನ ಸರ್ಕಾರಿ ಹಾರುವ ತರಬೇತಿ ಶಾಲೆಯಲ್ಲಿತ್ತು ಎಂದು ಸವಾಲು ಹಾಕಿದರು. 

ಜಕ್ಕೂರು ಪೊಲೀಸರಿಂದ ದೂರು ದಾಖಲು

ಆ ಸಮಯದಲ್ಲಿ ಪೈಲಟ್‌ನೊಂದಿಗೆ ಸಂವಹನ ನಡೆಸುತ್ತಿದ್ದ ಕಾರಣ ಅಪಘಾತದ ಬಗ್ಗೆ ಎಟಿಸಿಯೊಂದಿಗಿನ ಕರೆ ವಿವರಗಳಿವೆ ಎಂದು ಮೂಲಗಳು ಖಚಿತಪಡಿಸಿವೆ. ಅಲ್ಲದೆ, ವಿಮಾನವನ್ನು ತೆಗೆದು ರಿಪೇರಿಗಾಗಿ ಹೊರಕ್ಕೆ ಸಾಗಿಸಲಾಯಿತು. ಐದು ದಿನಗಳ ನಂತರ ಅದನ್ನು ಮರಳಿ ತಂದು ಹ್ಯಾಂಗರ್‌ನಲ್ಲಿ ಇರಿಸಲಾಯಿತು. ಸರ್ಕಾರಿ ಏರೋಡ್ರೋಮ್ ನಿರ್ಬಂಧಿತ ಪ್ರದೇಶ ಎಂದು ಪರಿಗಣಿಸಲಾಗಿದೆ. ಪೊಲೀಸ್ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಮಧ್ಯೆ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ಕೂಡ ತಮ್ಮದೇ ಆದ ತನಿಖೆ ನಡೆಸುತ್ತಿದ್ದಾರೆ. ಎರಡೂ ಏಜೆನ್ಸಿಗಳು ಏರೋಡ್ರೋಮ್‌ನಿಂದ ವಿಮಾನದ ಪ್ರವೇಶ ಮತ್ತು ನಿರ್ಗಮನದ ಸಿಸಿಟಿವಿ ದೃಶ್ಯಗಳನ್ನು ಹುಡುಕುತ್ತವೆ. ಅವರು ಸಂಬಂಧಪಟ್ಟ ಅಧಿಕಾರಿಯೊಂದಿಗೆ ಮಾತನಾಡುವುದರ ಜೊತೆಗೆ ಅಪಘಾತದ ಸಮಯದಲ್ಲಿ ವಿಮಾನ ಹಾರಾಟ ನಡೆಸುತ್ತಿದ್ದ ಮತ್ತು ಪೈಲಟ್‌ಗಳ, ಪ್ರತ್ಯಕ್ಷದರ್ಶಿಗಳ ಖಾತೆಗಳನ್ನು ಸಹ ದಾಖಲಿಸುತ್ತಿದ್ದಾರೆ. ಸರ್ಕಾರಿ ಹಾರಾಟ ತರಬೇತಿ ಶಾಲೆಯ ಕಾರ್ಯದರ್ಶಿಯಾಗಿರುವ ಬಸವ ರೆಡ್ಡಿ ಅವರನ್ನು ಸಂಪರ್ಕಿಸಿದಾಗ ಯಾವುದೇ ವಿವರ ನೀಡಲು ನಿರಾಕರಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com