ಹಂಪಿ ವಿರೂಪಾಕ್ಷ ದೇಗುಲದವರೆಗೆ ಆಟೋರಿಕ್ಷಾಗೆ ಪ್ರವೇಶ ನಿಷೇಧ: ಚಾಲಕರು ಅಸಮಾಧಾನ, ಮುಷ್ಕರದ ಎಚ್ಚರಿಕೆ

ಹಂಪಿಯ ವಿರೂಪಾಕ್ಷ ದೇವಸ್ಥಾನದವರೆಗೆ ಆಟೋರಿಕ್ಷಾಗಳಿಗೆ ಹೋಗಲು ಅವಕಾಶ ನೀಡದಿರುವುದನ್ನು ಖಂಡಿಸಿ ವಿಜಯನಗರ ಜಿಲ್ಲಾ ಆಟೋರಿಕ್ಷಾ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮುಷ್ಕರ ನಡೆಸಲು ಮುಂದಾಗಿದ್ದಾರೆ.
ಹಂಪಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಎಲೆಕ್ಟ್ರಿಕ್ ಬಸ್
ಹಂಪಿಯಲ್ಲಿ ಪ್ರವಾಸಿಗರನ್ನು ಕರೆದೊಯ್ಯುವ ಎಲೆಕ್ಟ್ರಿಕ್ ಬಸ್
Updated on

ಹೊಸಪೇಟೆ: ಹಂಪಿಯ ವಿರೂಪಾಕ್ಷ ದೇವಸ್ಥಾನದವರೆಗೆ ಆಟೋರಿಕ್ಷಾಗಳಿಗೆ ಹೋಗಲು ಅವಕಾಶ ನೀಡದಿರುವುದನ್ನು ಖಂಡಿಸಿ ವಿಜಯನಗರ ಜಿಲ್ಲಾ ಆಟೋರಿಕ್ಷಾ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮುಷ್ಕರ ನಡೆಸಲು ಮುಂದಾಗಿದ್ದಾರೆ. ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರವು (HWHAMA) ದೇವಾಲಯದವರೆಗೆ ಆಟೋ ಹೋಗಲು ಮತ್ತು ಆಟೊಗಳು ಸಾಸಿವೆಕಾಳು ಗಣೇಶನ ಪ್ರತಿಮೆಯ ಬಳಿ ಪ್ರಯಾಣಿಕರನ್ನು ಇಳಿಸಲು ಮಾತ್ರ ಅವಕಾಶ ನೀಡುತ್ತಿದ್ದು ಆಟೋ ಸಂಚಾರವನ್ನು ನಿರ್ಬಂಧಿಸುವ ನಿರ್ಧಾರವನ್ನು ತೆಗೆದುಕೊಂಡಿದೆ.

ಪ್ರವಾಸಿಗರು ವಿರೂಪಾಕ್ಷ ದೇಗುಲದ ಬಳಿ ವಾಹನ ನಿಲುಗಡೆ ಸ್ಥಳದವರೆಗೆ ಹೋಗುವ ಬಸ್‌ಗಳನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಲಾಗುತ್ತಿದ್ದು, ಇದು ಆಟೋರಿಕ್ಷಾ ಚಾಲಕರ ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆ. 

ಯುನೆಸ್ಕೋದ ಮಾರ್ಗಸೂಚಿಗಳ ಪ್ರಕಾರ, ಹಂಪಿಯಲ್ಲಿರುವ ಶತಮಾನಗಳ ಹಳೆಯ ಸ್ಮಾರಕಗಳಿಗೆ ಯಾವುದೇ ಹಾನಿಯಾಗದಂತೆ ಭೂಮಿ ಕಂಪಿಸದ ವಲಯದಲ್ಲಿ ಎಲ್ಲಾ ವಾಹನಗಳ (ಬ್ಯಾಟರಿ ಚಾಲಿತ ಮತ್ತು ಬಸ್‌ಗಳನ್ನು ಹೊರತುಪಡಿಸಿ) HWHAMA ಚಲನೆಯನ್ನು ನಿರ್ಬಂಧಿಸಿದೆ. ಆದರೆ ಅದೇ ಸಮಯದಲ್ಲಿ ಕಾರುಗಳು ಮತ್ತು ಇತರ ಸಾರ್ವಜನಿಕ ವಾಹನಗಳು ವಿರೂಪಾಕ್ಷ ದೇವಸ್ಥಾನದ ಪಾರ್ಕಿಂಗ್ ಬಳಿ ಹೋಗಲು ಅನುಮತಿ ನೀಡಿದ್ದು ಇದು ಆಟೋರಿಕ್ಷಾ ಚಾಲಕರು ಪ್ರಶ್ನಿಸುವಂತೆ ಮಾಡಿದೆ. 

ಹಲವು ವರ್ಷಗಳಿಂದ ಆಟೋರಿಕ್ಷಾಗಳಲ್ಲಿ ಪ್ರವಾಸಿಗರನ್ನು ಕರೆದೊಯ್ಯುತ್ತಿರುವ ಸ್ಥಳೀಯರ ಮೇಲೆ HWHAMA ನಿರ್ಧಾರವು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಾವು ಇಂದು HWHAMA ಕಚೇರಿ ಎದುರು ಪ್ರತಿಭಟನೆ ನಡೆಸಲು ಯೋಜಿಸಿದ್ದೇವೆ. ಶಾಸಕ ಮತ್ತು ಸಚಿವ ಆನಂದ್ ಸಿಂಗ್ ಅವರಿಗೆ ಜ್ಞಾಪನಾ ಪತ್ರವನ್ನು ನೀಡುತ್ತೇವೆ. ಕಳೆದ ಎರಡು ವರ್ಷಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗದಿಂದ ವ್ಯಾಪಾರ ವಹಿವಾಟು ನನೆಗುದಿಗೆ ಬಿದ್ದಿದ್ದು, ಹೊಸ ನಿಯಮಗಳಿಂದ ವ್ಯಾಪಾರದ ಮೇಲೆ ಮತ್ತಷ್ಟು ಪೆಟ್ಟು ಬೀಳಲಿದೆ ಎಂದು ವಿಜಯನಗರ ಜಿಲ್ಲಾ ಆಟೋರಿಕ್ಷಾ ಕಲ್ಯಾಣ ಸಂಘದ ಸದಸ್ಯರೊಬ್ಬರು ಹೇಳುತ್ತಾರೆ.

ಕಂಪಿಸದ ವಲಯಗಳಲ್ಲಿ ವಾಹನ ನಿಷೇಧದ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಲಾಗುತ್ತಿದೆ ಎಂದು HWHAMA ದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭವಿಷ್ಯದಲ್ಲಿ ವಿರೂಪಾಕ್ಷ ದೇವಸ್ಥಾನದ ಬಳಿ ಖಾಸಗಿ ಕಾರುಗಳು ಸೇರಿದಂತೆ ಎಲ್ಲಾ ರೀತಿಯ ವಾಹನಗಳನ್ನು ನಿಷೇಧಿಸುವ ಯೋಜನೆ ಇದೆ, ಮೊದಲ ಹಂತವಾಗಿ ನಾವು ವಿರೂಪಾಕ್ಷ ದೇವಸ್ಥಾನದಿಂದ ಅನತಿ ದೂರದಲ್ಲಿರುವ ಸಾಸಿವೆಕಲ್ಲು ಗಣೇಶ ದೇವಸ್ಥಾನದಲ್ಲಿ ಆಟೋಗಳನ್ನು ನಿಲ್ಲಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com