ಗ್ರಾಮ ಪಂಚಾಯಿತಿಯ 170 ಕೋವಿಡ್ ವಾರಿಯರ್ಸ್‌ಗೆ ಇನ್ನೂ ಸಿಗದ ಪರಿಹಾರ, ಸಂಕಷ್ಟದಲ್ಲಿ ಕುಟುಂಬಗಳು

ರಾಜ್ಯದ ಬಹುತೇಕ ಎಲ್ಲ ಕೋವಿಡ್ ವಾರಿಯರ್ಸ್ ಕುಟುಂಬಗಳು ಪರಿಹಾರವನ್ನು ಪಡೆದಿವೆ. ಆದರೆ, ಸುಮಾರು 170 ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸಂಬಂಧಿಕರು ಇನ್ನೂ ಸಹಾನುಭೂತಿಯ ಆಧಾರದ ಮೇಲೆ ಯಾವುದೇ ಪರಿಹಾರ ಅಥವಾ ಉದ್ಯೋಗವನ್ನು ಪಡೆದಿಲ್ಲ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ
Updated on

ಬೆಂಗಳೂರು: ರಾಜ್ಯದ ಬಹುತೇಕ ಎಲ್ಲ ಕೋವಿಡ್ ವಾರಿಯರ್ಸ್ ಕುಟುಂಬಗಳು ಪರಿಹಾರವನ್ನು ಪಡೆದಿವೆ. ಆದರೆ, ಸುಮಾರು 170 ಗ್ರಾಮ ಪಂಚಾಯಿತಿ ಸಿಬ್ಬಂದಿಯ ಸಂಬಂಧಿಕರು ಇನ್ನೂ ಸಹಾನುಭೂತಿಯ ಆಧಾರದ ಮೇಲೆ ಯಾವುದೇ ಪರಿಹಾರ ಅಥವಾ ಉದ್ಯೋಗವನ್ನು ಪಡೆದಿಲ್ಲ.

ಸಂತ್ರಸ್ತರಲ್ಲಿ ಹೆಚ್ಚಿನವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒಗಳು), ಬಿಲ್ ಕಲೆಕ್ಟರ್‌ಗಳು, ವಾಟರ್‌ಮೆನ್ ಮತ್ತು ಡೇಟಾ ಎಂಟ್ರಿ ಆಪರೇಟರ್‌ಗಳಾಗಿದ್ದಾರೆ. ಈ ಕುಟುಂಬಗಳ ಪರವಾಗಿ ಹೋರಾಟಕ್ಕಾಗಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಸದಾಸ್ಯರ ಮಹಾ ಒಕ್ಕೂಟವು ಡಿ. 12 ರಂದು ಫ್ರೀಡಂ ಪಾರ್ಕ್‌ನಲ್ಲಿ ಧರಣಿ ನಡೆಸುತ್ತಿದ್ದು, ರಾಜ್ಯದಾದ್ಯಂತ 6,012 ಗ್ರಾಮ ಪಂಚಾಯಿತಿಗಳ ಸದಸ್ಯರು ಭಾಗವಹಿಸುತ್ತಿದ್ದಾರೆ ಎಂದು ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್ ತಿಳಿಸಿದ್ದಾರೆ.

ಮೃತರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ ನೀಡಲು 2021ರ ಜೂನ್ 28 ರಂದು ಆರ್‌ಡಿಪಿಆರ್ ಇಲಾಖೆಯು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ 'ಆಶ್ವಾಸನೆ ನಿಧಿ' (ಪರಿಹಾರ ನಿಧಿ) ಸ್ಥಾಪಿಸಲು ಆದೇಶ ನೀಡಿದ್ದು, ಈ ನಿಧಿಗೆ ಜಿಲ್ಲಾ ಪಂಚಾಯಿತಿಗಳು 10 ಲಕ್ಷ ಮತ್ತು ತಾಲೂಕು ಪಂಚಾಯಿತಿಗಳು 5 ಲಕ್ಷ ರೂಪಾಯಿ ನೀಡುವಂತೆ ಕೇಳಲಾಯಿತು. ಆದರೆ, ಬಹುತೇಕ ಎಲ್ಲಾ ಜಿಲ್ಲಾ ಪಂಚಾಯಿತಿಗಳು ಮತ್ತು ತಾಲೂಕು ಪಂಚಾಯಿತಿಗಳು ಹಣದ ಕೊರತೆಯಿಂದಾಗಿ ಸಾಧ್ಯವಿಲ್ಲ ಎಂದಿವೆ. ಗ್ರಾಮ ಪಂಚಾಯಿತಿಗಳು ಸಹ ತಮ್ಮ ಆದಾಯದ ಮೇಲೆ 50,000 ರಿಂದ 3 ಲಕ್ಷ ರೂ. ಗಳನ್ನು ನೀಡುವಂತೆ ಕೇಳಲಾಗಿತ್ತು.

'ಭಾರಿ ಮೊತ್ತದ ವಿದ್ಯುತ್ ಬಿಲ್ ಸೇರಿದಂತೆ ವೆಚ್ಚ ಭರಿಸಬೇಕಾಗಿರುವುದರಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಗ್ರಾಮ ಪಂಚಾಯಿತಿಗಳ ಮೇಲೆ ಇಲಾಖೆ ಈ ಹೊಣೆಯನ್ನು ಹೇರಿದೆ. ಗ್ರಾಮ ಪಂಚಾಯಿತಿ ನೌಕರರನ್ನು ಸಂಬಂಧಪಟ್ಟ ಜಿಪಂ ಸಿಇಒ ನೇತೃತ್ವದ ಸಮಿತಿಗಳ ಮೂಲಕ ನೇಮಿಸಿದ್ದು, 170 ಸಂತ್ರಸ್ತರಿಗೆ 50 ಕೋಟಿ ರೂ.ವರೆಗೆ ಬರಬೇಕಾದ ಪರಿಹಾರವನ್ನು ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ' ಎಂದು ಸತೀಶ್ ಹೇಳಿದರು.

ಬೆಳಗಾವಿ, ಉಡುಪಿ, ಶಿವಮೊಗ್ಗ, ದಾವಣಗೆರೆ, ತುಮಕೂರಿನ 15 ಕುಟುಂಬಗಳಿಗೆ 15 ಲಕ್ಷದಿಂದ 20 ಲಕ್ಷ ರೂ.ವರೆಗೆ ಪರಿಹಾರ ಸಿಕ್ಕಿದ್ದು ಬಿಟ್ಟರೆ ಕೋವಿಡ್‌ನಿಂದ ಮೃತಪಟ್ಟ ಇತರ ಯಾರಿಗೂ ಪರಿಹಾರ ಸಿಕ್ಕಿಲ್ಲ. ಈ ಮೃತ ಗ್ರಾಮ ಪಂಚಾಯಿತಿ ಕಾರ್ಯಕರ್ತರ ಕುಟುಂಬಗಳು ಸಂಕಷ್ಟದಲ್ಲಿವೆ. ಆದರೆ, ಸರ್ಕಾರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಪಿಡಿಒಗಳ ಸಂಘದ ರಾಜ್ಯಾಧ್ಯಕ್ಷ ಎಚ್. ಬೋರಯ್ಯ ತಿಳಿಸಿದ್ದಾರೆ.

ಆರ್‌ಡಿಪಿಆರ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಸ್ತುವಾರಿ ಉಮಾ ಮಹದೇವನ್ ಮಾತನಾಡಿ, ಯುಕೆಗೆ ಅಧಿಕೃತ ಭೇಟಿ ನೀಡಿ ಹಿಂತಿರುಗಿದ್ದರಿಂದ ಈ ಸಮಸ್ಯೆಯ ಬಗ್ಗೆ ನನಗೆ ತಿಳಿದಿಲ್ಲ ಮತ್ತು ಶೀಘ್ರದಲ್ಲೇ ಅದನ್ನು ಪರಿಹರಿಸಲಾಗುವುದು ಎಂದು ಟಿಎನ್‌ಐಇಗೆ ತಿಳಿಸಿದ್ದಾರೆ.

ಅಕ್ಟೋಬರ್‌ನಲ್ಲಿ ಅಂದಿನ ಎಸಿಎಸ್ ಎಲ್‌.ಕೆ. ಅತೀಕ್ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತ್ಯೇಕ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com