ಕೃಷ್ಣಾ ನದಿಗೆ ಬಿದ್ದು ಮಹಿಳೆ ಆತ್ಮಹತ್ಯೆ; ಕೊಲ್ಹಾರ್ ಟೌನ್ ನಲ್ಲಿ ಘಟನೆ!

ಗುರುತು ತಿಳಿಯದ ಮಹಿಳೆಯೊಬ್ಬರು ಕೃಷ್ಣಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ವಿಜಯಪುರದಲ್ಲಿ ನಡೆದಿದೆ.
ನದಿಗೆ ಹಾರಿ ಪ್ರಾಣಬಿಟ್ಟ ಮಹಿಳೆ
ನದಿಗೆ ಹಾರಿ ಪ್ರಾಣಬಿಟ್ಟ ಮಹಿಳೆ

ವಿಜಯಪುರ: ಗುರುತು ತಿಳಿಯದ ಮಹಿಳೆಯೊಬ್ಬರು ಕೃಷ್ಣಾ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶನಿವಾರ ವಿಜಯಪುರದಲ್ಲಿ ನಡೆದಿದೆ.

ವಿಜಯಪುರದ ಕೊಲ್ಹಾರ ಟೌನ್ ನಲ್ಲಿ ಇಂದು ಬೆಳಗ್ಗೆ ಈ ಘಟನೆ ನಡೆದಿದ್ದು, ದ್ವಿಚಕ್ರ ವಾಹನದಲ್ಲಿ ಬಂದ ಮಹಿಳೆ ವಾಹನವನ್ನು ಸೇತುವೆ ಬಳಿ ನಿಲ್ಲಿಸಿ ನೋಡ-ನೋಡುತ್ತಲೇ ತಡೆಗೋಡೆ ಮೇಲೇರಿದ್ದಾರೆ. ದಾರಿಹೋಕರು ಇದನ್ನು ಕಂಡು ಆಕೆಯನ್ನು ತಡೆಯುವಷ್ಟರಲ್ಲಿಯೇ ಆಕೆ ನೀರಿಗೆ ಹಾರಿದ್ದಾರೆ ಎನ್ನಲಾಗಿದೆ. 

ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದ್ದು, ಪೊಲೀಸರು ಘಟನಾ ಪ್ರದೇಶಕ್ಕೆ ಬರುವಷ್ಟರಲ್ಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿದೆ. ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಗುರುತು ಪತ್ತೆ ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com