ಕಬ್ಬು ಕಟಾವಿಗೆ ಕರೆತರಲಾಗಿದ್ದ ತಮಿಳುನಾಡಿನ 10 ಕಾರ್ಮಿಕರನ್ನು ರಕ್ಷಿಸಿದ ಹಾಸನ ಪೊಲೀಸರು

ತಾಲ್ಲೂಕಿನ ಗನ್ನಿಕಾಡಾ ಗ್ರಾಮದ ಸಮೀಪ ಹುಲಿವಾಲಾ ಕೊಪ್ಪಾಲುನಲ್ಲಿ ತಮಿಳುನಾಡಿನ 10 ಕಾರ್ಮಿಕರನ್ನು ಹಾಸನ ಪೊಲೀಸರು ರಕ್ಷಿಸಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹೊಳೆನರಸಿಪುರ: ತಾಲ್ಲೂಕಿನ ಗನ್ನಿಕಾಡಾ ಗ್ರಾಮದ ಸಮೀಪ ಹುಲಿವಾಲಾ ಕೊಪ್ಪಾಲುನಲ್ಲಿ ತಮಿಳುನಾಡಿನ 10 ಕಾರ್ಮಿಕರನ್ನು ಹಾಸನ ಪೊಲೀಸರು ರಕ್ಷಿಸಿದ್ದಾರೆ. 

ತಿಂಗಳುಗಳ ಹಿಂದೆ ತಮಿಳುನಾಡಿನ ಅಂಬೂರ್ ನಗರದಿಂದ ಕಾರ್ಮಿಕರನ್ನು ಕರೆತಂದಿದ್ದ ಕಾರ್ಮಿಕ ಗುತ್ತಿಗೆದಾರರು ಎಂದು ಹೇಳಲಾದ ಶಿವಮೋಗಾ ಜಿಲ್ಲೆಯ ಮೂಲದ ಪುಷ್ಪಾ ಮತ್ತು ರುಕ್ಮಿನಿಯನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದಂತೆ ರಾಮಲಿಂಗಂ, ಧ್ರುವ ಮತ್ತು ತುರುಬಣ್ಣ ನಾಪತ್ತೆಯಾಗಿದ್ದಾರೆ. 

ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಪ್ರಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರವಿಕಾಂತ್ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಗ್ರಾಮಕ್ಕೆ ತೆರಳಿದ್ದು ಅಲ್ಲಿ ವಿಜಯ್, ಮಲ್ಲಿಕಾ ದುರ್ಗಾ, ಮಟ್ಟು, ಚಲುವೆ, ಸತ್ಯಪ್ರಿಯಾ, ಸ್ವಪ್ನಾ, ಅಮ್ಮು, ನದಿಯಾ ಮತ್ತು ಅನ್ನಪೂರ್ಣಳನ್ನು ರಕ್ಷಿಸಿದ್ದಾರೆ. 

ಗುತ್ತಿಗೆದಾರರು ಕಾರ್ಮಿಕರಿಗೆ ಹಲವಾರು ದಿನಗಳವರೆಗೆ ವೇತನ, ಆಹಾರ ಮತ್ತು ಆಶ್ರಯ ನೀಡದಿದ್ದರಿಂದ ಅವರು ಅನಾರೋಗ್ಯ ಪೀಡಿತರಾಗಿದ್ದರು. ಅವರಿಗೆ ಜಿಲ್ಲಾ ಪ್ರಾಧಿಕಾರವು ಹಾಸನದ ಪುನರ್ವಸತಿ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ.

ಗುತ್ತಿಗೆದಾರರು ತಮಿಳುನಾಡಿನ ಕಾರ್ಮಿಕನ್ನು ಕಬ್ಬು ಕಟಾವು ಮತ್ತು ಲೋಡ್ ಮಾಡಲು ಕರೆತಂದಿದ್ದರು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com