ಚಿತ್ರದುರ್ಗ: ಚಳ್ಳಕೆರೆ ತಾಲೂಕಿನ ನಾಯಕನಹಟ್ಟಿ ಗ್ರಾಮದ ಕೆರೆಯಲ್ಲಿ ಮುಳುಗಿ ತಾಯಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿರುವಂತಹ ದಾರುಣ ಘಟನೆ ನಡೆದಿದೆ.
ಮೃತರು ಚಳ್ಳಕೆರೆ ತಾಲೂಕಿನ ಹಿರೇಹಳ್ಳಿಯ ನಿವಾಸಿಗಳಾದ 25 ವರ್ಷದ ದುರ್ಗಮ್ಮ, 6 ವರ್ಷದ ಅಜ್ಜಯ್ಯ ಹಾಗೂ 4 ವರ್ಷದ ಸೇವಂತಿ ಎಂದು ಗುರುತಿಸಲಾಗಿದೆ.
ಬೋಸೇದೇವರಹಟ್ಟಿ ಜಾತ್ರೆಗೆ ಪತ್ನಿ, ಮಕ್ಕಳನ್ನು ಮಹಾಂತೇಶ ಕರೆತಂದಿದ್ದನು. ಗಂಗಾ ಪೂಜೆಗೆಂದು ನಾಯಕನಹಟ್ಟಿ ಹಿರೇಕೆರೆಗೆ ಕರೆದೊಯ್ದು ಅಲ್ಲಿ ಪತ್ನಿ ಮತ್ತು ಮಕ್ಕಳನ್ನು ಆತನೆ ಕೆರೆಗೆ ತಳ್ಳಿ ಕೊಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಮಹಾಂತೇಶನನ್ನು ನಾಯಕನಹಟ್ಟಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
Advertisement