ಝಿಕಾ ವಿರುದ್ಧ ಹೋರಾಡಲು ಸೊಳ್ಳೆಗಳ ಸಂತಾನೋತ್ಪತ್ತಿ ತಾಣಗಳನ್ನು ನಿರ್ಮೂಲನೆಗೊಳಿಸಿ: ತಜ್ಞರು

ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಕೇಸ್ ಪತ್ತೆಯಾಗಿದ್ದು, ಝಿಕಾ ವಿರುದ್ಧ ಹೋರಾಡಲು ನಗರದಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವಂತೆ ಸಾರ್ವಜನಿಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಮೊದಲ ಝಿಕಾ ವೈರಸ್ ಕೇಸ್ ಪತ್ತೆಯಾಗಿದ್ದು, ಝಿಕಾ ವಿರುದ್ಧ ಹೋರಾಡಲು ನಗರದಲ್ಲಿ ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡುವಂತೆ ಸಾರ್ವಜನಿಕರಿಗೆ ವೈದ್ಯರು ಸಲಹೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮಳೆಗಾಲವು ಏಳೆಂಟು ತಿಂಗಳ ಕಾಲ ವಿಸ್ತರಣೆಗೊಂಡಿರುವುದರಿಂದ ಈ ಸಂದರ್ಭದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ.

ಕೆಸಿ ಜನರಲ್ ಆಸ್ಪತ್ರೆಯ ಡಾ.ಲಕ್ಷ್ಮೀಪತಿ ಸುದ್ದೇಕುಂಟೆ ಮಾತನಾಡಿ, ಆರು ತಿಂಗಳಿನಿಂದ ಪ್ರತಿದಿನ ಎರಡರಿಂದ ಮೂರು ಪ್ರಕರಣಗಳು ಪತ್ತೆಯಾಗುತ್ತಿವೆ. ಝಿಕಾ ವೈರಸ್ ಒಬ್ಬರಿಂದ ಒಬ್ಬರಿಗೆ ಹರಡುವ ರೋಗವಾಗಿದ್ದು, ಡೆಂಗ್ಯೂ-ಉಂಟುಮಾಡುವ ಸೊಳ್ಳೆಗಳಿಂದಲೂ ಹರಡುವ ಸಾಧ್ಯತೆಗಳಿವೆ, ಹೀಗಾಗಿ ನಗರದಲ್ಲಿ ಸೊಳ್ಳೆ ಉತ್ಪತ್ತಿಯಾಗುವ ಎಲ್ಲಾ ಸ್ಥಳಗಳನ್ನು ನಿರ್ಮೂಲನೆ ಮಾಡಬೇಕೆಂದು ಸಲಹೆ ನೀಡಿದ್ದಾರೆ.

ಡೆಂಗ್ಯೂ, ಜಾಂಡೀಸ್, ಮೆದುಳಿನ ಜ್ವರ, ವೆಸ್ಟ್ ನೈಲ್ ವೈರಸ್‌ಗಳಿಗೆ ಝಿಕಾ ನಿಕಟ ಸಂಬಂಧ ಹೊಂದಿದೆ. ಇದು ಸೋಂಕಿತ ಈಡಿಸ್ ಜಾತಿಯ ಸೊಳ್ಳೆಯ ಕಚ್ಚುವಿಕೆಯ ಮೂಲಕ ಹರಡುತ್ತದೆ, ಇದು ಡೆಂಗ್ಯೂಗೆ ಕಾರಣವಾಗಿದೆ ಎಂದು ತೀವ್ರ ನಿಗಾ ಸೇವೆಗಳ ಮಕ್ಕಳ ಸಲಹೆಗಾರ ಡಾ.ನವೇದ್ ಅಜಮ್ ವಿವರಿಸಿದರು.

ನಿಂತ ನೀರನ್ನು ಸ್ವಚ್ಛಗೊಳಿಸುವುದು ಅಥವಾ ಸಂಗ್ರಹಿಸಿದ ನೀರಿನ ಮೇಲೆ ಲಾರ್ವಿಡಲ್ ಎಣ್ಣೆಯನ್ನು ಸಿಂಪಡಿಸಲು ವೈದ್ಯರು ಸಲಹೆ ನೀಡಿದ್ದಾರೆ.

ಪೋಷಕರು ತಮ್ಮ ಮಕ್ಕಳಿಗೆ ಪೂರ್ಣ ತೋಳಿನ ಬಟ್ಟೆಗಳನ್ನು ಧರಿಸುವಂತೆ ಮತ್ತು ಸೊಳ್ಳೆ ನಿವಾರಕ ಕ್ರೀಮ್‌ಗಳನ್ನು ಬಳಸುವಂತೆ, ಬೆಡ್ ನೆಟ್‌ಗಳು, ಕಿಟಕಿ ಪರದೆಗಳು, ವೇಪರೈಸರ್‌ಗಳಂತಹ ರಕ್ಷಣೆಯ ಕ್ರಮಗಳನ್ನು ಬಳಸುವಂತೆಯೂ ಸಲಹೆ ನೀಡಿದ್ದಾರೆ.

ಗರ್ಭಿಣಿಯರು ಝಿಕಾ ವೈರಸ್'ಗೆ ಹೆಚ್ಚು ಗುರಿಯಾಗುತ್ತಿದ್ದು, ಗರ್ಭಿಣಿಯರಿಗೆ, ನವಜಾತ ಶಿಶುಗಳಿಗೆ ಹೆಚ್ಚೆಚ್ಚು ಪರೀಕ್ಷೆ ನಡೆಸುವಂತೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com