ಮೈಸೂರು: ಕಬಿನಿ ನಾಲೆಗೆ ಕಾರು ಬಿದ್ದ ಪರಿಣಾಮ ಇಬ್ಬರು ವಕೀಲರು ಸಾವನ್ನಪ್ಪಿರುವ ಧಾರುಣ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಸಾಗರೆ ಸಮೀಪದ ಕಬಿನಿ ಜಲಾಶಯದ ಬಲದಂಡೆ ನಾಲೆಯಲ್ಲಿ ನೀರುಪಾಲಾಗಿದ್ದ ಹುಣಸೂರಿನ ಇಬ್ಬರು ವಕೀಲರ ಮೃತದೇಹ ಶನಿವಾರ ಪತ್ತೆಯಾಗಿದೆ.
ಸಾಗರೆ ಸಮೀಪದ ಬೆಟ್ಟಯ್ಯ ಸೇತುವೆ ಬಳಿಯಿಂದ ನೂರು ಮೀಟರ್ ದೂರದಲ್ಲಿ ಗಿರೀಶ್ ಮೃತದೇಹ ಪತ್ತೆಯಾದರೆ, ತಾಲೂಕಿನ ಬೊಂತಗಾಲದಹುಂಡಿ ಗ್ರಾಮದ ಕೆರೆ ಬಳಿ ಇರುವ ನಾಲೆಯಲ್ಲಿ ದಿನೇಶ್ ಮೃತದೇಹ ಪತ್ತೆಯಾಗಿದೆ. ಸರಗೂರು ಪೊಲೀಸರು ಇಟ್ನ ಗ್ರಾಮದ ಈಜು ತಜ್ಞರ ಸಹಾಯದಿಂದ ಮೃತದೇಹಗಳನ್ನು ಪತ್ತೆಹಚ್ಚಿದ್ದಾರೆ.
ಹೇಗಾಯ್ತು ದುರಂತ
ಹುಣಸೂರು ತಾಲೂಕಿನ ಉಂಡವಾಡಿ ಗ್ರಾಮದ ಸಿ.ದಿನೇಶ್ (46) ಹಾಗೂ ನಿಲುವಾಗಿಲು ಗ್ರಾಮದ ಗಿರೀಶ್ (44) ಹಾಗೂ ಅಶೋಕ್ ಪ್ರಕರಣವೊಂದರ ಸಂಬಂಧ ಶನಿವಾರ ಎಚ್.ಡಿ.ಕೋಟೆಗೆ ಕಾರಿನಲ್ಲಿ ತೆರಳಿದ್ದರು. ಊಟ ಮಾಡಲು ಕಬಿನಿ ಡ್ಯಾಂ ಬಳಿಯ ಬಿದರಹಳ್ಳಿ ಸಮೀಪದ ಹೋಟೆಲ್ಗೆ ತೆರಳಿ ನಂತರ ಸರಗೂರು ಕಡೆಗೆ ತೆರಳುವಾಗ ದಾರಿ ಮಧ್ಯೆ ಸಾಗರೆ ಸಮೀಪದ ಬೆಟ್ಟಯ್ಯನ ಸೇತುವೆ ಬಳಿ ರಸ್ತೆ ಕ್ರಾಸ್ ಇರುವುದು ಗಮನಕ್ಕೆ ಬಾರದ ಹಿನ್ನೆಲೆ ಕಾರು ನೇರವಾಗಿ ನಾಲೆಯಲ್ಲಿ ಬಿದ್ದಿದೆ. ನೀರಿನ ಸೆಳೆತಕ್ಕೆ ಸಿಕ್ಕಿ ದಿನೇಶ್ ಹಾಗೂ ಗಿರೀಶ್ ಕೊಚ್ಚಿ ಹೋಗಿದ್ದರು. ಅಶೋಕ ಪಾರಾಗಿದ್ದರು.
Advertisement