ಬರಗೂರು ರಾಮಚಂದ್ರಪ್ಪ ಸಮಿತಿ 'ತುಕಡೆ ತುಕಡೆ ಗ್ಯಾಂಗ್'ನ ಭಾಗ: ಶಿಕ್ಷಣ ಸಚಿವ ಬಿಸಿ ನಾಗೇಶ್

ಬರಗೂರು ರಾಮಚಂದ್ರಪ್ಪ ಪುಸ್ತಕ ಪರಿಷ್ಕರಣೆ ಸಮಿತಿ ತುಕಡೆ-ತುಕಡೆ ಗ್ಯಾಂಗ್'ನ ಭಾಗವಾಗಿತ್ತು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಭಾನುವಾರ ಹೇಳಿದ್ದಾರೆ.
ಬಿಸಿ ನಾಗೇಶ್
ಬಿಸಿ ನಾಗೇಶ್

ದಾವಣಗೆರೆ: ಬರಗೂರು ರಾಮಚಂದ್ರಪ್ಪ ಪುಸ್ತಕ ಪರಿಷ್ಕರಣೆ ಸಮಿತಿ ತುಕಡೆ-ತುಕಡೆ ಗ್ಯಾಂಗ್'ನ ಭಾಗವಾಗಿತ್ತು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಭಾನುವಾರ ಹೇಳಿದ್ದಾರೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಶಿಕ್ಷಣ ಇಲಾಖೆಗೆ ಪತ್ರ ಬರೆದಿರುವ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಜೆಎನ್‌ಯುನವರು ಹಿಂದೆ ಭಾರತವನ್ನ ತುಕಡೆ ತುಕಡೆ ಮಾಡಿ, ಪಾಕಿಸ್ತಾನ ಧ್ವಜ ಹಾರಿಸಿದ್ದರು. ಇದೇ ಕಾರಣಕ್ಕೆ ಇದೀಗ ಅವರು ನಮ್ಮ ರಾಜ್ಯದ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ಪ್ರತಿರೋಧದ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಇದರಿಂದ ಅವರು ದೇಶ ವಿರೋಧಿ ಕೃತ್ಯವನ್ನ ನಡೆಸುತ್ತಿದ್ದಾರೆಂದು ಕಿಡಿಕಾರಿದ್ದಾರೆ.

ತುಕಡೆ ತುಕಡೆ ಗ್ಯಾಂಗ್ ಮಾಡಿದ ಕೆಲಸವನ್ನೇ ನಮ್ಮ ರಾಜ್ಯದಲ್ಲಿ ಹಿಂದೆ ಕೂಡ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದೆ. ಆಗ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಜೆಎನ್‌ಯು ಪ್ರಾಧ್ಯಾಪಕರು ಕೂಡ ಇದ್ದರು. ಹೀಗಾಗಿ, ಭಾರತವನ್ನ ಒಡೆಯುವ ಹಾಗೂ ಹಿಂದು ಸಮಾಜವನ್ನ ಒಡೆಯುವ ದೊಡ್ಡ ಗ್ಯಾಂಗ್ ಜೆಎನ್‌ಯು ನಲ್ಲಿದೆ ಎಂಬುದು ಗೊತ್ತಾಗುತ್ತದೆ. ಇದೇ ಕಾರಣ ಭಾರತವನ್ನ ತುಕಡೆ ತುಕಡೆ ಮಾಡುವ ಕೆಲಸವನ್ನ ಬರಗೂರು ರಾಮಚಂದ್ರಪ್ಪ ಸಮಿತಿ ಮಾಡಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಈಗಾಗಲೇ ಶೇ. 75 ರಷ್ಟು ಪುಸ್ತಕ ವಿತರಣೆ ಮಾಡಿ ಆಗಿದೆ. ಬರಗೂರು ಸಮಿತಿಯಲ್ಲಿ ಬಸವಣ್ಣವರ ಬಗ್ಗೆ ಏನಿತ್ತೋ ಈಗಲೂ ಅದೇ ಇದೆ. ಬಸವಣ್ಣವರ ಬಗ್ಗೆ ಏನು ಅವಮಾನ ಆಗಿದೆ ಎಂದು ಹೇಳಿ ಎಂದು ಪ್ರಶ್ನೆ ಮಾಡಿದರು.

ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ಅನುಮೋದಿಸಲಾದ ಹಳೆಯ ಪಠ್ಯವನ್ನೇ ರೋಹಿತ್ ಚಕ್ರತೀರ್ಥ ಸಮಿತಿ ಉಳಿಸಿಕೊಂಡಿದ್ದು, ವಚನಕಾರರ ಅನುಮಾನಗಳನ್ನು ನಿವಾರಿಸಲಾಗಿದೆ ಎಂದರು.

ಬಳಿಕ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕುರಿತು ಮಾತನಾಡಿ, 6-12 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಬೇಕು ಮತ್ತು ಸರ್ಕಾರವು ಸಮಸ್ಯೆಯನ್ನು ತ್ವರಿತಗೊಳಿಸುತ್ತದೆ ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com