ಮಡಿಕೇರಿ: ಪೆರಾಜೆ ತೂಗುಸೇತುವೆ ಶಿಥಿಲ; ಬೇಕಿದೆ ಕಾಯಕಲ್ಪ

ಕಳೆದ ಮೂರು ದಶಕಗಳಿಂದ ಗ್ರಾಮೀಣ ಸಂಪರ್ಕಕ್ಕೆ ಸಹಕಾರಿಯಾಗಿದ್ದ, ನೂರಾರು ರೈತರಿಗೆ ನಿರಂತರ ಜೀವನೋಪಾಯಕ್ಕೆ ನೆರವಾಗಿದ್ದ ಮಡಿಕೇರಿ ತಾಲೂಕಿನ ಪೆರಾಜೆ ಪಂಚಾಯಿತಿಯ ಅಮೆಚೂರಿನಲ್ಲಿರುವ ಪಾದಚಾರಿ ತೂಗುಸೇತುವೆ...
ಪೆರಾಜೆ ತೂಗುಸೇತುವೆ
ಪೆರಾಜೆ ತೂಗುಸೇತುವೆ
Updated on

ಮಡಿಕೇರಿ: ಕಳೆದ ಮೂರು ದಶಕಗಳಿಂದ ಗ್ರಾಮೀಣ ಸಂಪರ್ಕಕ್ಕೆ ಸಹಕಾರಿಯಾಗಿದ್ದ, ನೂರಾರು ರೈತರಿಗೆ ನಿರಂತರ ಜೀವನೋಪಾಯಕ್ಕೆ ನೆರವಾಗಿದ್ದ ಮಡಿಕೇರಿ ತಾಲೂಕಿನ ಪೆರಾಜೆ ಪಂಚಾಯಿತಿಯ ಅಮೆಚೂರಿನಲ್ಲಿರುವ ತೂಗುಸೇತುವೆ ಈಗ ಶಿಥಿಲಾವಸ್ಥೆಯಲ್ಲಿದ್ದು, ಕುಸಿಯುವ ಭೀತಿ ಎದುರಾಗಿದೆ.

ಅನೇಕ ಗ್ರಾಮಸ್ಥರು ಈ ಸೇತುವೆಯ ಮೇಲೆ ಕಾಲಿಡಲು ಭಯಪಡುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಪಾದಚಾರಿ ಸೇತುವೆಯ ಹಲಗೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂಬಂತೆ ಕಂಡರೂ, ಲೋಹದ ಗಾಳಗಳು ಮತ್ತು ಸೇತುವೆಯನ್ನು ಹಿಡಿದಿರುವ ಹಗ್ಗಗಳು ದುರ್ಬಲಗೊಂಡಿವೆ. ಇದಲ್ಲದೆ, 2022 ರ ಪ್ರವಾಹದ ನಂತರ ಸೇತುವೆಯು ತನ್ನ ಮೂಲ ಆಕಾರವನ್ನು ಕಳೆದುಕೊಂಡಿದೆ ಮತ್ತು ಜೀವಕ್ಕೆ ಅಪಾಯಕಾರಿಯಾಗಿದೆ.

ಈ ತೂಗು ಸೇತುವೆ ಪೆರಾಜೆ ಗ್ರಾಮವನ್ನು ದಕ್ಷಿಣ ಕನ್ನಡದ ಅರಂತೋಡು ಗಡಿ ಗ್ರಾಮದೊಂದಿಗೆ ಸಂಪರ್ಕಿಸುತ್ತದೆ. ಇದು ಪಯಸ್ವಿನಿ ನದಿಯ ಎರಡು ದಡಗಳನ್ನು ಕೂಡ ಸಂಪರ್ಕಿಸುತ್ತದೆ.

ಪ್ರಶಸ್ತಿ ವಿಜೇತ ಬ್ರಿಡ್ಜ್‌ಮ್ಯಾನ್ ಗಿರೀಶ್ ಭಾರದ್ವಾಜ್ ಅವರು 1989 ರಲ್ಲಿ ನಿರ್ಮಿಸಿದ ತೂಗು ಸೇತುವೆಗಳಲ್ಲಿ ಈ ಸೇತುವೆಯು ಮೊದಲನೆಯದು.

ಈ ಹಿಂದೆ, 2019 ರಲ್ಲಿ, ಸೇತುವೆಯನ್ನು ದುರಸ್ತಿ ಮಾಡಲು ಟೆಂಡರ್ ಕರೆಯಲಾಗಿತ್ತು. ಆದರೆ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ನಂತರ ಅದಕ್ಕೆ ಅನುಮೋದನೆ ಸಿಕ್ಕಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com