ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ; 72 ಗಂಟೆಗಳ ಅವಧಿಯಲ್ಲಿ ನಾಲ್ಕು ಬಾರಿ ಭೂಕಂಪನ

ಕಳೆದ 72 ಗಂಟೆಗಳಿಂದ ವಿಜಯಪುರ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯ ಜತೆಗೆ ಭೂಕಂಪನವೂ ಹೆಚ್ಚುತ್ತಿದೆ. 72 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಕಡಿಮೆ ತೀವ್ರತೆಯ ನಾಲ್ಕು ಭೂಕಂಪಗಳು ವರದಿಯಾಗಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ವಿಜಯಪುರ: ಕಳೆದ 72 ಗಂಟೆಗಳಿಂದ ವಿಜಯಪುರ ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಮಳೆಯ ಜತೆಗೆ ಭೂಕಂಪನವೂ ಹೆಚ್ಚುತ್ತಿದೆ. 72 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ ಕಡಿಮೆ ತೀವ್ರತೆಯ ನಾಲ್ಕು ಭೂಕಂಪಗಳು ವರದಿಯಾಗಿವೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಅಧಿಕಾರಿಗಳು ಈ ಪ್ರದೇಶದಲ್ಲಿ ವರದಿಯಾದ ಸಣ್ಣ ಕಂಪನಗಳನ್ನು ದೃಢಪಡಿಸಿದ್ದಾರೆ. ಜಿಲ್ಲೆಯ ಯಾವುದೇ ಭಾಗದಲ್ಲಿ ಭೂಕಂಪನದಿಂದ ಯಾವುದೇ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ವರದಿಯಾಗಿಲ್ಲ.

ಕೆಎಸ್‌ಎನ್‌ಡಿಎಂಸಿ ಪ್ರಕಾರ, ಶುಕ್ರವಾರ 2.0 ಮತ್ತು 1.9 ತೀವ್ರತೆಯ ಎರಡು ಭೂಕಂಪನಗಳು ದಾಖಲಾಗಿವೆ. ಈ ಎರಡೂ ಭೂಕಂಪನಗಳ ಕೇಂದ್ರಬಿಂದು ಬಸವನಬಾಗೇವಾಡಿಯ ಉಕ್ಕಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 10 ಕಿ.ಮೀ ಆಳದಲ್ಲಿ ದಾಖಲಾಗಿದೆ. ಇವೆರಡರ ನಡುವೆ ಒಂದು ನಿಮಿಷದ ವ್ಯತ್ಯಾಸವಿದೆ. ಇದಾದ ಎರಡು ಗಂಟೆಗಳ ನಂತರ, ಅದೇ ಗ್ರಾಮದಲ್ಲಿ 3.2 ತೀವ್ರತೆಯ ಮತ್ತೊಂದು ಭೂಕಂಪನ (ಮೂರನೇ ಭೂಕಂಪನ) ದಾಖಲಾಗಿದೆ. ಅಲ್ಲಿಯೇ 10 ಕಿಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ.

ವಿಜಯಪುರದ ಅಲಿಯಾಬಾದ್ ಗ್ರಾಮ ಪಂಚಾಯಿತಿಯಲ್ಲಿ ಭಾನುವಾರ 2.5 ತೀವ್ರತೆಯ ನಾಲ್ಕನೇ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ಅಲಿಯಾಬಾದ್‌ನಲ್ಲಿ 8 ಕಿ.ಮೀ ಆಳದಲ್ಲಿ ವರದಿಯಾಗಿದೆ. ಈ ಎಲ್ಲಾ ಭೂಕಂಪಗಳು ಕಡಿಮೆ ತೀವ್ರತೆಯನ್ನು ಹೊಂದಿವೆ ಮತ್ತು ಭೂಕಂಪನವು ಕೇಂದ್ರ ಬಿಂದುವಿನಿಂದ 20 ರಿಂದ 30 ಕಿಮೀ ರೇಡಿಯಲ್ ದೂರದವರೆಗೆ ಸಂಭವಿಸಬಹುದು.

'ಈ ರೀತಿಯ ಭೂಕಂಪವು ಸ್ಥಳೀಯ ಸಮುದಾಯಕ್ಕೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ. ಏಕೆಂದರೆ, ಇದು ಕಡಿಮೆ ತೀವ್ರತೆ ಇರುತ್ತದೆ. ಆದರೆ, ಭೂಮಿ ಕಂಪಿಸಿದ ಅನುಭವವಾಗಬಹುದು. ಭೂಕಂಪನ ವಲಯ III ರಲ್ಲಿ ಕೇಂದ್ರಬಿಂದು ಇರುತ್ತದೆ. ಕಡಿಮೆ ತೀವ್ರತೆ ಇರುವುದರಿಂದ ಜನರು ಭಯಪಡುವ ಅಗತ್ಯವಿಲ್ಲ' ಎಂದು ಕೆಎಸ್‌ಎನ್‌ಡಿಎಂಸಿ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com