ಮುರುಘಾ ಶರಣರ ಪ್ರಕರಣ ಬಗ್ಗೆ ಮಾತನಾಡಲು ನನಗೆ ವಾಕರಿಕೆ ಬರುತ್ತದೆ, ಮಾತನಾಡಿದರೆ ಅನಿಷ್ಟ: ಕೆ ಎಸ್ ಈಶ್ವರಪ್ಪ

ಪೋಕ್ಸೋ ಪ್ರಕರಣದಡಿ ಬಂಧಿತರಾಗಿ ಜೈಲುಪಾಲಾಗಿರುವ ಮುರುಘಾ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಶರಣರ ಪ್ರಕರಣ ಬಗ್ಗೆ ಮಾತನಾಡಲು ವಾಕರಿಕೆ ಬರುತ್ತದೆ, ಅದರ ಬಗ್ಗೆ ನನಗೆ ಮಾತನಾಡಲು ಮನಸ್ಸಿಲ್ಲ ಎಂದು ಮಾಜಿ ಸಚಿವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಕೆ ಎಸ್ ಈಶ್ವರಪ್ಪ
ಕೆ ಎಸ್ ಈಶ್ವರಪ್ಪ

ಶಿವಮೊಗ್ಗ: ಪೋಕ್ಸೋ ಪ್ರಕರಣದಡಿ ಬಂಧಿತರಾಗಿ ಜೈಲುಪಾಲಾಗಿರುವ ಮುರುಘಾ ಮಠದ ಡಾ ಶಿವಮೂರ್ತಿ ಶಿವಾಚಾರ್ಯ ಶರಣರ ಪ್ರಕರಣ ಬಗ್ಗೆ ಮಾತನಾಡಲು ವಾಕರಿಕೆ ಬರುತ್ತದೆ, ಅದರ ಬಗ್ಗೆ ನನಗೆ ಮಾತನಾಡಲು ಮನಸ್ಸಿಲ್ಲ ಎಂದು ಮಾಜಿ ಸಚಿವ ಬಿಜೆಪಿ ನಾಯಕ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಹಿಂದೂ ಧರ್ಮಕ್ಕೆ ಪ್ರೇರಣೆ ಆಗುವುದು ಸಾಧು ಸಂತರು, ಮಠದ ಬಗ್ಗೆ ನನಗೆ ಹಿಂದಿನಿಂದಲೂ ಗೌರವವಿದೆ, ಈಗಲೂ ಇದೆ ಮುಂದೆಯೂ ಇರುತ್ತದೆ, ಪ್ರಕರಣ ಕೇಳಿಬಂದಾಗಿನಿಂದ ಇದು ಸುಳ್ಳಾಗಲಿ ಎಂದು ನಾನು ದೇವರಲ್ಲಿ ಪ್ರಾರ್ಥಿಸಿದ್ದೇನೆ, ಪ್ರಕರಣದ ತನಿಖೆ ನ್ಯಾಯಾಲಯದಲ್ಲಿ ನಡೆಯುತ್ತಿದೆ, ತೀರ್ಪು ಬರಲಿ ಆಮೇಲೆ ಪ್ರತಿಕ್ರಿಯಿಸುತ್ತೇನೆ ಎಂದರು.

ಈ ಪ್ರಕರಣ ಬಗ್ಗೆ ಮಾತನಾಡಲು ನನಗೆ ಮನಸ್ಸಿಲ್ಲ, ವಾಕರಿಕೆ ಬರುತ್ತದೆ, ಅದರ ಬಗ್ಗೆ ಮಾತನಾಡಿದರೆ ಅನಿಷ್ಟ ಬರುತ್ತದೆ. ನನಗೆ ಮಠಾಧೀಶರು ಎಂದರೆ ದೇವರಿದ್ದ ಹಾಗೆ, ಕೇಸು ನಡೆಯುತ್ತಿರುವಾಗ ಮಾತನಾಡುವುದು ಏಕೆ ಎಂದರು. 

ಮುರುಘಾ ಮಠಾಧೀಶರ ಬಗ್ಗೆ ನನಗೆ ಗೌರವವಿದೆ, ಅವರ ಬಗ್ಗೆ ತನಿಖೆ ನಡೆದು ಸತ್ಯವೇ, ಸುಳ್ಳೇ ಎಂದು ಹೊರಗೆ ಬರಲಿ, ಒಂದೇ ಸಲಕ್ಕೆ ತೀರ್ಮಾನಕ್ಕೆ ಬರುವುದು ಬೇಡ, ಇಡೀ ದೇಶದಲ್ಲಿ ಮಠಮಂದಿರಗಳು ಜನರಲ್ಲಿ ಭಕ್ತಿಯನ್ನು ಹೆಚ್ಚಿಸುವ ಧಾರ್ಮಿಕ ಕೇಂದ್ರಗಳು, ಮುರುಘಾ ಮಠಾಧೀಶರ ಬಗ್ಗೆ ಕೇಳಿಬಂದಿರುವ ಆರೋಪ ಸುಳ್ಳಾಗಲಿ ಎಂದು ಆಶಿಸುತ್ತೇನೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com